K2kannadanews.in
bus came to station ದೇವದುರ್ಗ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ (Travel in bus) ವೇಳೆ ಬ್ಯಾಗ್ನಲ್ಲಿಟ್ಟಿದ್ದ 50 ಗ್ರಾಂನ ಎರಡು ಚಿನ್ನದ ಸರಗಳನ್ನು (Gold Chin) ಕಳವು ಮಾಡಲಾಗಿದ್ದ ಕಾರಣ ಬಸ್ಸನ್ನೇ ನೇರವಾಗಿ ಠಾಣೆಗೆ (Stations) ತಂದು ತಪಾಸಣೆ ನಡೆಸಿದ ಘಟನೆ ಜಾಲಹಳ್ಳಿಯಲ್ಲಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ಘಟನೆ ನಡೆದಿದೆ. ಮಹಿಳೆಯೊಬ್ಬರು ಬಳ್ಳಾರಿಯಿಂದ (Ballary) ತಿಂಥಣಿ ಬ್ರಿಜ್ ಮೂಲಕ ದೇವದುರ್ಗಕ್ಕೆ ಬರುತ್ತಿರುವ ಸಮಯದಲ್ಲಿ ಬ್ಯಾಗ್ನಲ್ಲಿಟ್ಟಿದ್ದ (Bag) 50 ಗ್ರಾಂನ ಎರಡು ಚಿನ್ನದ ಸರಗಳನ್ನು ಕಳವು ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಹಿಳೆ (lady) ಹಾಗೆ ಹೇಳುತ್ತಿದ್ದಂತೆ ಚಾಲಕ ಬಸ್ಸನ್ನು (Bus driver) ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ. ನಂತರ ಪೊಲೀಸರು ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರ ಬ್ಯಾಗ್ಗಳನ್ನು ಪರಿಶೀಲಿಸಿದರೂ ಚಿನ್ನದ ಸರಗಳು ಸಿಕ್ಕಿಲ್ಲ. ಯಾರೋ ಕಳುವು ಮಾಡಿ ಹಿಂದಿನ ಸ್ಟಾಪ್ ನಲ್ಲೆ ಇಳಿದಿರಬೇಕು ಎಂದು, ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆಗೆ ಸಂಬಂದಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ.
[ays_poll id=3]