K2 ಕ್ರೈಂ ನ್ಯೂಸ್ : ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಕಾಲವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಣ ಜನಕ ಘಟನೆ ಎಂದು ನಡೆದಿದೆ. ಹೌದು ಕೌಟುಂಬಿಕ ಕಲಹ ಹಿನ್ನಲೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಶರಣಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದ್ದು, ತಾಯಿ ರೇಣುಕಾ ಅಮೀನಪ್ಪ ಕೋನಿನ್ (26 ), ಯಲ್ಲವ್ವ (2) ಅಮೃತಾ (1) ಮೃತಪಟ್ಟಿದ್ದಾರೆ. ಕಾಲುವೆಯಲ್ಲಿ ರೇಣುಕಾ ಹಾಗೂ ಓರ್ವ ಹೆಣ್ಣು ಮಗುವಿನ ಶವ ಪತ್ತೆ ಆಗಿದೆ. ಮತ್ತೋರ್ವ ಹೆಣ್ಣು ಮಗುವಿನ ಶವಕ್ಕಾಗಿ ಸ್ಥಳೀಯರು ಹಾಗೂ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ಇನ್ನು ಘಟನೆಯು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರ ಭಾಗದಲ್ಲಿರೋ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ ಹಾರಿ ಸಾವನ್ನಪ್ಪಿದ್ದಾರೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ....
K2 ಕ್ರೈಂ ನ್ಯೂಸ್ : ಹೆತ್ತ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿ ಕಬ್ಬಿನ ತೋಟದ ಬೋರ್ವೆಲ್ ಗೆ ಹಾಕಿದ ಮಗನ ನೀಚ ಕೃತ್ಯ ಬಯಲು. ಪರಶುರಾಮ(54) ಕೊಲೆಯಾದ ತಂದೆ. ಇನ್ನೂ ಪಾಪಿ ಮಗ ವಿಠ್ಠಲ ಆರೋಪಿಯಾಗಿದ್ದು, ನಿತ್ಯ ಕುಡಿತದಿಂದ ಜಗಳವಾಡುತ್ತಿದ್ದನೆಂಬ ಹಿನ್ನೆಲೆಯಲ್ಲಿ ತಂದೆಯನ್ನೇ ಕೊಡಲಿಯಿಂದ ಹೊಡೆದು ತುಂಡು ತುಂಡಾಗಿ ಕತ್ತಿರಿಸಿ ನಿರೂಪಯುಕ್ತ ಬೋರ್ವೆಲ್ನಲ್ಲಿ ಕಳೆದ ಡಿಸೆಂಬರ್ 7ರಂದು ಹಾಕಿದ್ದಾನೆ. ಘಟನೆಯು ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಜಂಜರಕೊಪ್ಪ ಗಲ್ಲಿಯಲ್ಲಿ ನಡೆದಿದೆ. ಮುಧೋಳ ಪೋಲಿಸರಿಂದ ತನಿಖೆ ಮುಂದುವರೆದಿದ್ದು, ಕಬ್ಬಿನ ತೋಟದಲ್ಲಿ ನಿರುಪಯುಕ್ತ ಕೊಳವಿ ಬಾವಿಯನ್ನು ಜೆಸಿಬಿಯಿಂದ ಬೋರ್ವೆಲ್ ಕೊರೆಯುವ ಕೆಲಸ ನಡೆದಿದೆ. ಇನ್ನು ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಸಗಿದೆ....
ಸಿಂಧನೂರು : ತಾಲೂಕಿನ 4 ಮೈಲಿ ಕ್ಯಾಂಪ್ ಬಳಿ ರಸ್ತೆ ಬದಿ ನಿಂತಿದ್ದ ದ್ವಿಚಕ್ರ ವಾಹನ ಸವಾರನಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಭೀಕರ ಘಟನೆಯಲ್ಲಿ ನಾಲ್ಕು ಜನ ಗಾಳಿಯಲ್ಲಿ ಹಾರಿದ ಭೀಕರ ದೃಶ್ಯ ಸರಿಯಾಗಿದೆ. ಹೌದು ರಸ್ತೆ ಬದಿಯಲ್ಲಿ ಮೂರು ಮಕ್ಕಳೊಂದಿಗೆ ನಿಂತಿದ್ದ ಹನುಮಂತ ಎಂಬುವ ವ್ಯಕ್ತಿಯ ದ್ವಿಚಕ್ರ ವಾಹನ ಸವಾರನಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಕಾರೊಂದು ರಭಸವಾಗಿ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಮೂರು ಮಕ್ಕಳು, ವ್ಯಕ್ತಿ ಗಾಳಿಯಲ್ಲಿ ಹಾರಿ ಬಿದ್ದಿದ್ದಾರೆ. ಅಪಘಾತದ ಭೀಕರತೆಗೆ ಮಕ್ಕಳು ಸೇರಿ ಹನುಮಂತ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. https://youtu.be/xqfSYciTbjY ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ 108 ಆಂಬುಲೆನ್ಸ್ ಗೆ ಕರೆ ಮಾಡುವ ಮೂಲಕ ಗಂಭೀರವಾಗಿ ಗಾಯಗೊಂಡುವರನ್ನು ತಕ್ಷಣಕ್ಕೆ ಬಳ್ಳಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದ್ದು ಘಟನೆ ನೋಡಿದರೆ ಮೈ ಜುಮ್...
K2 ನ್ಯೂಸ್ ಡೆಸ್ಕ್ : ತಂದೆಯಿಂದಲೇ 10 ಲಕ್ಷ ರೂ. ಸುಫಾರಿ ಕೊಲೆ ಪ್ರಕರಣ, ಇಂದು ಬೆಳಿಗ್ಗೆ ಮೃತದೇಹ ಹೊರತೆಗೆಯಲಿರುವ ಹುಬ್ಬಳ್ಳಿ ಪೊಲೀಸರು, ತಹಶಿಲ್ದಾರ, ಎಸಿ ಸಮ್ಮುಖದಲ್ಲಿ ಅಖಿಲ್ ಮೃತದೇಹ ಹೊರಗೆ ತೆಗೆಯುವ ಕಾರ್ಯ ಆರಂಭ. ಸಾಲದ ವಿಚಾರಕ್ಕೆ ತಂದೆಗೆ ಮಗನಿಗೆ ಶುಭ ಕೋರಿ ಕೊಟ್ಟ ವಿಚಾರದ ಈ ಒಂದು ಘಟನೆ ಹೋಬಳಿಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಮೂರು ದಿನಗಳ ನಂತರ ಕಲಘಟಗಿಯ ದೇವಿಕೊಪ್ಪದ ಬಳಿ ಕಬ್ಬಿನಗದ್ದೆಯಲ್ಲಿ ಹಂತಕರು ಶವ ಹೂಡಿದ್ದಾರೆ. ಸತತ ಎರಡು ದಿನಗಳ ಕಾಲ ಮೃತದೇಹಕ್ಕಾಗಿ ಶೋಧ ಮಾಡಿದ್ದ ಪೊಲೀಸರು, ಕಬ್ಬಿನ ಗದ್ದೆಯಲ್ಲಿ ಗುಂಡಿ ತೋಡಿ ಶವ ಹೂಳಿರೋ ಹಂತಕರು. ಕಲಘಟಗಿಯ ಕಾರವಾರ ರಸ್ತೆಯಲ್ಲಿನ ಪಕ್ಕದ ಜಮೀನಿನಲ್ಲಿ ಶವ ಹೂಳಿಟ್ಟಿರೋ ಜಾಗ ಗುರುತಿಸಲಾಗಿದೆ, ಇನ್ನೂ ಸುಫಾರಿ ಹಂತಕರಿಗೂ ಪೊಲೀಸರ ಹುಡುಕಾಟ ನಡೆಸಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಅಖಿಲ್ ತಂದೆ ಭರತ್ ಮಹಾಜನ್ ಶೇಠ್ ವಿಚಾರಣೆ...
ರಾಯಚೂರು : ತಾಲೂಕಿನ ಬಿ.ಯದ್ಲಾಪುರ ಗ್ರಾಮದ ರೈತ ನಾಗಪ್ಪ (52) ಸಾಲ ಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ ಗಿಲ್ಲೆಸೂಗೂರು ಹೋಬಳಿ ವ್ಯಾಪ್ತಿಯ ಬಿ.ಯದ್ಲಾಪುರದ ರೈತ ನಾಗಪ್ಪ ಹೆಚ್ ಡಿಎಫ್ ಸಿ ಬ್ಯಾಂಕಿನಲ್ಲಿ 9.60 ಲಕ್ಷ ಸಾಲ ಮಾಡಿಕೊಂಡಿದ್ದರು. 9 ಎಕರೆ ಜಮೀನಿನಲ್ಲಿ ಬೆಳೆಯನ್ನೂ ಬೆಳೆಯುತ್ತಿದ್ದರು. ಆದರೆ ಅವರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ವರ್ಷವಷ್ಟೇ ನಾಗಪ್ಪ ಅವರ ಹಿರಿಮಗ ಶಿವರಾಜ್ ಸಾಲಬಾಧೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
K2 ಕ್ರೈಂ ನ್ಯೂಸ್ : ಕಾಲುವೆಯಲ್ಲಿನ ಮೋಟಾರ್ಗೆ ನೀರು ಹಾಕಲು ಹೋದಾಗ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಹೌದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಜಾಕವೆಲ್ ದೊಡ್ಡ ಕಾಲುವೆಯಲ್ಲಿ ಘಟನೆ ನಡೆದಿದ್ದು, ಶೇಖಪ್ಪ ಡೆಂಗಿ 40 ಮೃತಪಟ್ಟಿರುವ ದುರ್ದೈವಿ ಯಾಗಿದ್ದಾರೆ. ಕಾಲುವೆಯಲ್ಲಿನ ಮೋಟಾರ್ಗೆ ನೀರು ಹಾಕಲು ಹೊದ ವೇ ಕೆಲಸ ಮಾಡುವಾಗ ನೀರಿನ ಇಳಿಜಾರಿಗೆ ಕಾಲು ಜಾರಿ ಬಿದ್ದು ಶೇಖಪ್ಪ ಮೃತಪಟ್ಟಿದ್ದಾರೆ. ಅಲ್ಲದೇ, ಅಶೋಕ ಅಂಗಡಿಗೇರಿ 45 ಎಂಬುವ ವ್ಯಕ್ತಿ ನಾಪತ್ತೆಯಾಗಿದ್ದು ಆತನಿಗೆ ಹುಡುಕಾಟ ಆರಂಭಿಸಿದ್ದಾರೆ. ಕೂಡಗಿ ಎನ್ಟಿಪಿಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ....
ರಾಯಚೂರು : ಗುಡದೂರು ನಾಲೆ ಬಳಿ ಬೈಕ್ ಮತ್ತು KSRTC ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಮೂವರು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮದ ನಾಲೆ ಬಳಿ ಘಟನೆ ಸಂಭವಿಸಿದೆ. ಮೃತ ಮೂವರು ವ್ಯಕ್ತಿಗಳನ್ನು ಆಂಧ್ರ ಮೂಲದ ನಂದ್ಯಾಲ ಗ್ರಾಮದವರು ಎಂದು ಹೇಳಲಾಗುತ್ತಿದ್ದು, ಶ್ರೀನಿವಾಸ್(26), ಜೈಪಾಲ್(19), ನಾಗರಾಜ್(30) ಮೃತರು ಎನ್ನಲಾಗಿದೆ. ಮಸ್ಕಿ ಪಟ್ಟಣದಲ್ಲಿ ಊಟ ಮುಗಿಸಿಕೊಂಡು ನಾಲ್ಕು ಜನ ಬೈಕ್ ನಲ್ಲಿ ತೆರಳುವಾಗ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಭತ್ತದ ಕಟಾವ್ ಮೀಷನ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಇವರಾಗಿದ್ದು, ನಿನ್ನೆ ರಾತ್ರಿ ಊಟಕ್ಕೆಂದು ಮಸ್ಕಿ ಪಟ್ಟಣಕ್ಕೆ ಬಂದಿದ್ದಾರೆ. ವಾಪಸ್ ಆಗುತ್ತಿದ್ದ ವೇಳೆ ಬೈಕ್ ದಾರುಣ ಘಟನೆ ಸಂಭವಿಸಿದೆ ಎಂದು...
K2 ನ್ಯೂಸ್ ಡೆಸ್ಕ್ : ಎಸ್.ಬಿ.ಐ. ಬ್ಯಾಂಕ್ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಮಾಡಿ ಸಿನಿಮಾ ರೀತಿಯಲ್ಲಿ ಹಣ ಇರುವ ಬ್ಯಾಕ್ ಅಪಹರಿಸಿ ಪರಾರಿಯಾದ ಘಟನೆ ಚಿತ್ತಾಪುರ ಪಟ್ಟಣದ ರೈಲ್ವೆ ಕ್ವಾಟರ್ಸ ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ. ಚಿತ್ತಾಪುರ ತಾಲ್ಲೂಕಿನ ಮೊಗಲಾ ತಾಂಡಾದ ಶಂಕರ ರಾಠೋಡ್ ಎಂಬುವವರು ಚಿತ್ತಾಪುರದ ಎಸ್.ಬಿ.ಐ. ಬ್ಯಾಂಕ್ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕ್ ಮೇಲೆ ರೈಲ್ವೆ ಕ್ವಾಟರ್ಸ ಕಡೆಗೆ ಹೊರಟಿದ್ದರು. ಇದನ್ನು ಗಮನಿಸಿದ ಇಬ್ಬರು ಸುಲಿಗೆಕೋರರು ಅವರನ್ನು ಹಿಂಬಾಲಿಸಿ 1.40 ಲಕ್ಷ ರೂ. ಇದ್ದ ಹಣದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಖದೀಮರು ಮಂಕಿಕ್ಯಾಪ್ ಧರಿಸಿದ್ದರು ಎಂದು ತಿಳಿದುಬಂದಿದೆ. ಶಂಕರ ರಾಠೋಡ್ ಅವರು ಬ್ಯಾಂಕಿನಲ್ಲಿ ಸಾಲದ ರೂಪದಲ್ಲಿ ಪಡೆದಿದ್ದ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,...