This is the title of the web page
This is the title of the web page
Politics NewsVideo News

ಸೆಲ್ಫಿಗಾಗಿ ಬಂದವರಿಗೆ ಬಿತ್ತು ಪೊಲೀಸ್ ಲಾಠಿ ಏಟು..


K2kannadanews.in

Political news ರಾಯಚೂರು : ಬಿಜೆಪಿ (BJP) ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಅಣ್ಣಮಲೈ (Annamalai) ಜೊತೆ ಸೆಲ್ಫಿ (Selfi) ತೆಗೆದುಕೊಳ್ಳಲು ಮುಗಿಬಿದ್ದ ವೇಳೆ ಗಲಾಟೆ ಹೆಚ್ಚಾಗಿ ಪೊಲೀಸರು (Police) ಲಾಠಿ ರುಚಿ ತೋರಿಸಿದ್ದಾರೆ.

ಹೌದು ನಗರದ ಸಂತೋಷ್ ಹಬ್ ನಲ್ಲಿ ನಡೆಯುತ್ತಿದ್ದ ಬಿಜೆಪಿ‌ ಕಾರ್ಯಕ್ರಮದ ಬಳಿಕ ಅಣ್ಣಾಮಲೈ ಅವರಿಗೆ ವೇದಿಕೆ (Stage) ಮೇಲೆ ಹೂವಿನ ಹಾರ ಹಾಕಲು ನೂಕು ನುಗ್ಗಲು ಉಂಟಾಗಿದೆ. ಅಲ್ಲದೇ ಅಣ್ಣಾಮಲೈ ಜೊತೆ ಸೆಲ್ಫಿ ತೆಗೆದುಕೊಳ್ಳಲು‌ ವೇದಿಕೆ ಮೇಲೆ ಮುಗಿಬಿದ್ದಿದ್ದಾರೆ. ಬಿಜೆಪಿ‌ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕಾರ್ಯಕರ್ತರನ್ನ ಚದುರಿಸಲು ವೇದಿಕೆ ಮೇಲೆಯೇ ಪೊಲೀಸರು ಲಾಠಿ ಬೀಸಿದರು.


[ays_poll id=3]