K2kannadanews.in
RATS IN HOSPITAL: ಆಸ್ಪತ್ರೆಯಲ್ಲಿ (Hospital) ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದ್ದ, ವ್ಯಕ್ತಿಯ ಮೃತದೇಹವನ್ನು ರಾತ್ರೋರಾತ್ರಿ ಇಲಿಗಳು(Rats) ತಿವಿದು ತಿಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharastra) ರಾಜಧಾನಿ ಮುಂಬಯಿನಲ್ಲಿ (Mumbai) ನಡೆದಿದೆ.
ಮುಂಬಯಿಯ ಆಂಥೋನಿ ಚಾಲ್ ನಲ್ಲಿ ಘಟನೆ ನಡೆದಿದ್ದು, ಸಚಿನ್ ಮದನ್ ಕಾಕರ್ (38) ಎಂಬಾತ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ. ದಿನಗೂಲಿ ಕಾರ್ಮಿಕನಾಗಿದ್ದ ಸಚಿನ್ ಪತ್ನಿ ಮತ್ತು ಇಬ್ಬರು ಮಕ್ಕಳು ವಿರಾರ್ನಲ್ಲಿರುವ ತಾಯಿಯ ಮನೆಯಲ್ಲಿದ್ದರು. ಕಾಕರ್ ಅವರ ತಾಯಿ ಮತ್ತು ಕಿರಿಯ ಸಹೋದರ ಕೊಂಚ ದೂರದ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ 11.30ರ ಸುಮಾರಿಗೆ ಸಚಿನ್ ನನ್ನು ಭೇಟಿಯಾಗಲು ಬಂದಾಗ ಆತ ಮನೆಯ ಟೆರೇಸ್ನಲ್ಲಿ ಕಂಬಕ್ಕೆ ನೇಣು ಹಾಕಿಕೊಂಡಿರುವುದನ್ನು ನೋಡಿ ಕಿರುಚಿದಳು. ಕೂಡಲೇ ನೆರೆಹೊರೆಯವರು ಸ್ಥಳದಲ್ಲಿ ಸೇರಿ ಮೃತದೇಹವನ್ನು ಕೆಳಗಿಳಿಸಿ ಶತಾಬಾದಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಿದ್ದಾರೆ.
ಪೊಲೀಸರು ಪಂಚನಾಮೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಹಸ್ತಾಂತರಿಸಿದ್ದಾರೆ. ಮರುದಿನ ಬೆಳಗ್ಗೆ 10 ಗಂಟೆ ಸುಮಾರಿಗೆ ಕುಟುಂಬ ಸದಸ್ಯರು ಶವವನ್ನು ಪಡೆಯಲು ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯಲ್ಲಿ ಪೊಲೀಸರೂ ಇದ್ದರು. ರಾತ್ರೋರಾತ್ರಿ ಮೃತದೇಹದ ಮೂಗು, ತಲೆ, ಹಣೆ ಮತ್ತು ಖಾಸಗಿ ಭಾಗಗಳನ್ನು ಇಲಿಗಳು ತಿಂದಿರುವುದು ನೋಡಿದ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಿ ಹೋದಾಗ ಅದು ಪರಿಪೂರ್ಣ ಸ್ಥಿತಿಯಲ್ಲಿತ್ತು. ದೇಹವನ್ನು ಇಲಿಗಳು ತಿಂದಿರುವ ಬಗ್ಗೆ ಆಸ್ಪತ್ರೆ ಅಧಿಕಾರಿಗಳೂ ಒಪ್ಪಿಕೊಂಡಿದ್ದಾರೆ. ಆದರೆ ಆಸ್ಪತ್ರೆಯ ಅಧಿಕಾರಿಗಳ ಜತೆ ಶಾಮೀಲಾಗಿರುವ ಪೊಲೀಸರು ಈ ವಿಷಯವನ್ನು ತಳ್ಳಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಸ್ಪತ್ರೆ ನಿರ್ಲಕ್ಷದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
[ays_poll id=3]