ರಾಯಚೂರು : ನಗರದ ಎಪಿಎಂಸಿ ಆವರಣದಲ್ಲಿ ಮಳೆ ಬಂದ ಹಿನ್ನೆಲೆ, ರೈತರು ಮಾರಾಟಕ್ಕೆ ತಂದ ಭತ್ತ ಮಳೆಯಲ್ಲಿ ತೋಯ್ದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ರಾಯಚೂರು ಜಿಲ್ಲೆಯಲ್ಲಿ ಮಳೆಯ ಕೊರತೆಯಲ್ಲಿ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಇನ್ನು ಬೋರ್ವೆಲ್ ಸೇರಿ ಇತರೆ ನೀರಿನ ಮೂಲದಿಂದ, ಬೆಳೆದ ಭತ್ತ ಮಾರಾಟ ಮಾಡಲು ರೈತರು, ರಾಯಚೂರು ನಗರದ ರಾಜೇಂದ್ರ ಗಂಜ್ ಎಪಿಎಂಸಿಗೆ ತಂದಿದ್ದಾರೆ. ಈ ವೇಳೆ ಏಕಏಕಿ ಸುರಿದ ಮಳೆಯಿಂದಾಗಿ ಆವರಣದಲ್ಲಿ ಹಾಕಿದ್ದ ಭತ್ತ, ಮಳೆಯ ನೀರಿಗೆ ತೋಯ್ದಿದ್ದು ಇದರಿಂದ ರೈತ ತನ್ನ ಭತ್ತ ಖರೀದಿಸುತ್ತಾರೊ ಇಲ್ಲೊ ಎಂಬ ಅಂತಕಕ್ಕೆ ಒಳಗಾಗಿದ್ದಾನೆ.
[ays_poll id=3]