K2 ಪೊಲಿಟಿಕಲ್ ನ್ಯೂಸ್ : ಸದಾ ಸಾಮಾಜಿಕ ಜಾಲತಾಣದಲ್ಲೆ ಕಾಲಹರಣ ಮಾಡುವ ಸತ್ಯ ಸಂಶೋಧನಾ ಸಮಿತಿ ಮಂತ್ರಿ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಡಿ ಎಂದು ಫೆಸ್ಬುಕ್ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಪೋಸ್ಟ್ ಮಾಡಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಹೌದು ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂದು ಫೆಸ್ ಬುಕ್ ನಲ್ಲಿ ಬಿಜೆಪಿ ಮಾಡಿರುವ ಪೋಸ್ಟ್ ಈಗ ಚರ್ಚೆಗೆ ಗ್ರಾಸವಾಗಿದೆ. ಸದಾ ಸಾಮಾಜಿಕ ಜಾಲತಾಣದಲ್ಲೆ ಕಾಲಹರಣ ಮಾಡುವ ಸತ್ಯ ಸಂಶೋಧನಾ ಸಮಿತಿ ಮಂತ್ರಿ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ. ದಯವಿಟ್ಟು ಹುಡುಕಿಕೊಡಿ ಎಂದು ಫೆಸ್ಬುಕ್ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಪೋಸ್ಟ್ ಮಾಡಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಬಿಜೆಪಿ ಘಟಕ FB ಮೂಲಕ ಪೋಸ್ಟ್ ವಾರ್ ಆರಂಬಿಸಿದೆ. ಕಾಂಗ್ರೆಸ್ನ ದುರಾಳಿಡತಕ್ಕೆ ಬೇಸತ್ತ ಗ್ರಾಮವಾಸಿಗರು ಗ್ರಾಮೀಣಾಭಿವೃದ್ಧಿ ಸಚಿವರ ಶೋಧನೆಯಲ್ಲಿ ತೊಡಗಿದ್ದಾರೆ. ಇವರು ಸೇರಿಕೊಂಡಿರುವ ಜಾಗದ ಖಚಿತ ಮಾಹಿತಿಗಾಗಿ ಜನ ಕಾದು ಕೂತಿದ್ದಾರೆ. ರಾಜ್ಯದಲ್ಲಿ ನಕಲಿ ಪತ್ರಗಳ ಹಾವಳಿ ಜಾಸ್ತಿಯಾದ್ರು ಮಾಯವಾಗಿರೋ, ಸತ್ಯ ಸಂಶೋಧನಾ ಮಂತ್ರಿಯನ್ನು ಹುಡುಕಿಕೊಟ್ಟವರಿಗೆ ಸತ್ಯ ಸಂಶೋಧನಾ ತಂಡಕ್ಕೆ ನೇಮಿಸಲಾಗುವುದು ಉಚಿತ, ನಿಶ್ಚಿತ, ಖಚಿತ ಎಂದು ಪೋಸ್ಟ ವೈರಲ್ ಆಗಿದೆ.
[ays_poll id=3]