This is the title of the web page
This is the title of the web page
Local NewsPolitics News

ಕಾಂಗ್ರೆಸ್ ಪಕ್ಷದಿಂದ ವಿವಾದಾತ್ಮಕ ಹೇಳಿಕೆ ನೀಡಿದ ಬಷಿರುದ್ದಿನ್ ಅಮಾನತು..


K2kannadanews.in

Political News ರಾಯಚೂರು : ಜೈ ಶ್ರೀರಾಮ್ (jai sriram) ಅಂತ ಹೇಳಿದವರನ್ನು ಬೂಟಿನಲ್ಲಿ (Boot) ಹೊಡಿಬೇಕು ಎಂಬ ಕೈ ಮುಖಂಡನ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂದಿಸಿದಂತೆ ಇದೀಗ ಮುಖಂಡ ಬಷಿರುದ್ದಿನ್ (Basheruddin) ಅವರನ್ನು ಕಾಂಗ್ರೆಸ್ (congress) ಪಕ್ಷದಿಂದ ಅಮಾನತು (suspended) ಮಾಡಿ ಆದೇಶಿಸಲಾಗಿದೆ.

ಹೌದು ನಿನ್ನೆಯಿಂದ ರಾಯಚೂರು (Raichur) ಜಿಲ್ಲೆಯಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ (Social media) ಕಾಂಗ್ರೆಸ್ ಪಕ್ಷದ ಮುಖಂಡ ಬಷಿರುದ್ದೀನ್ ಹಿಂದು (anty Hindu) ವಿರೋಧಿ ಹೇಳಿಕೆ ಸಾಮಾಜಿ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ, ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಸುದ್ದಿಯಾಗಿ ಪಕ್ಷ ಮುಜುಗರಕ್ಕೆ ಒಳಗಾಗಿತ್ತು. ಹಾಗಾಗಿ ಶಿಸ್ತು ಪಾಲನಾ ಸಮಿತಿ ಕೆ.ರೆಹಮಾನ್ ಖಾನ್ (Rehaman khan) ಅವರು, ಯಾವುದೇ ಸೂಕ್ಷ್ಮ ವಿಚಾರದ ಹೇಳಿಕೆ ಕೊಡಬಾರದು ಎಂಬ ಸೂಚನೆ ‌ಇತ್ತು, ಆದ್ರೂ ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆ ವಿಡಿಯೋ ಈಗ ವೈರಲ್ ‌ಆಗಿದ್ದು, ಇದರಿಂದ ‌ಪಕ್ಷಕ್ಕೆ ಮತ್ತು ‌ಮುಖಂಡರಿಗೆ ಮುಜುಗರ ಆದ ಕಾರಣಕ್ಕಾಗಿ ‌ತಮಗೆ ಕಾಂಗ್ರೆಸ್ ‌ಪಕ್ಷದಿಂದ ಅಮಾನತು ಮಾಡಲಾಗಿದೆ‌ ಎಂದು ಆದೇಶ ಪತ್ರದಲ್ಲಿ ಬರೆಯಲಾಗಿದೆ.

ಇಂದು ಶ್ರೀರಾಮ ಘೋಷಣೆ ‌ಕೂಗಿದ್ರೆ ಪೊಲೀಸರು ‌ಬೂಟ್ ನಿಂದ ಹೊಡೆಯಬೇಕು ಹೇಳಿಕೆ ವಿಚಾರ ಖಂಡಿಸಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ಅಸಮಧಾನ ಹೊರಹಾಕಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಅಮಾನತು ಮಾಡಿ ಕೆಪಿಸಿಸಿ ಆದೇಶ ಹೊರಡಿಸೊದೆ.


[ays_poll id=3]