This is the title of the web page
This is the title of the web page
Crime NewsVideo News

ಕಾಲು ಜಾರಿ ಕೆರೆಗೆ ಬಿದ್ದ ಬಾಲಕ ಸಿಕ್ಕಿದ್ದು ಶವವಾಗಿ..

Oplus_0

K2kannadanews.in

Crime News ಕವಿತಾಳ : 9 ವರ್ಷದ (Years) ಬಾಲಕನೋರ್ವ (Boy) ಕೆರೆಯಲ್ಲಿ (lake) ಬಿದ್ದು ಶವವಾಗಿ (Body) ಪತ್ತೆಯಾಗಿರುವ ಘಟನೆ ಬಸಾಪುರ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ತಾಲೂಕಿನ ಬಸಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಆನಂದ ಶಿವಪ್ಪ (anand shivappa 9) ಮೃತ ಬಾಲಕ. ಕುರಿ (Sheep) ಮೇಯಿಸಲು ತೆರಳಿದ್ದ, ಆನಂದ ಗ್ರಾಮದ ಕನಕಪ್ಪ ಅವರ ಜಮೀನಿನಲ್ಲಿನ (Land) ಕೆರೆಯಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ ಎಂದು ಹೇಳಲಾಗುತ್ತಿದೆ. ತಾಯಿಯೊಂದಿಗೆ (Mother) ಬಟ್ಟೆ ತೊಳೆಯಲು ಹೋದ ವೇಳೆ ಈಜಲು (Swimming) ಕೆರೆಗೆ ಹಾರಿದ ಹುಡುಗ, ಕೆಸರಿನಲ್ಲಿ ಸಿಕ್ಕಿಕೊಂಡು ಮೃತಪಟ್ಟಿದ್ದಾನೆ ಎಂದು ಒಂದಷ್ಟು ಜನ ಹೇಳುತ್ತಿದ್ದಾರೆ.

ಬಾಲಕ ನೀರಿಗೆ ಬಿದ್ದರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು (Villagers) ಹುಡುಕಾಟ (surch) ನಡೆಸಿದ್ದಾರೆ. ಸ್ವಲ್ಪ ಸಮಯದ (Some time) ನಂತರ ಬಾಲಕನ ಮೃತ ದೇಹ ಸಿಕ್ಕಿದೆ. ಸ್ಥಳಕ್ಕೆ ಲಿಂಗಸುಗೂರಿನಿಂದ (Lingasuguru) ಅಗ್ನಿ ಶಾಮಕ ಸಿಬ್ಬಂದಿ ಬರುವ ವೇಳಗೆ ಗ್ರಾಮಸ್ಥರು ಮೃತ ದೇಹವನ್ನು ಹೊರ ತೆಗೆದ್ದಿದ್ದರು. ಘಟನೆಯು ಕವಿತಾಳ ಪೊಲಿಸ್ (Kavitala police) ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.


[ays_poll id=3]