K2kannadanews.in
Crime News ಲಿಂಗಸುಗೂರು : ಸ್ನೇಹಿತರೊಂದಿಗೆ (With friends) ಕಾಲುವೆಗೆ (channel) ಈಜಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ಕೋಟಾ (kota village) ಗ್ರಾಮದ ಬಳಿ ಜರುಗಿದೆ.
ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಕೊಠಾ ಗ್ರಾಮದ ಬಳಿಯ 9A ಕಾಲುವೆಯಲ್ಲಿ ಘಟನೆ ನಡೆದಿದ್ದು, ಈಜಾಡಲು ಹೋಗಿದ್ದ ಅಯ್ಯನ್ ಶಫಿ(17) ನೀರು ಪಾಲಾದ ಬಾಲಕ. ಮೂರು ಸ್ನೇಹಿತರೊಂದಿಗೆ ಕಾಲುವೆಗೆ ಈಜಲು (Swimming) ಹೋಗಿದ್ದರು. ಈ ವೇಳೆ ಅಯ್ಯನ್ ಶಫಿ (Ayyan ನೀರಿನಲ್ಲಿ ಮುಳುಗಿ ನೀರುಪಾಲಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಲಿಂಗಸುಗೂರು ಅಗ್ನಿ ಶಾಮಕ ದಳದ ಸಿಬ್ಬಂದಿ, ಶೋಧಕಾರ್ಯ ನಡೆಸಿ ಬಾಲಕನನ್ನು ನೀರಿನಿಂದ ಹೊರತೆಗೆದಿದ್ದಾರೆ. ಇನ್ನು ಘಟನೆಯು ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
[ays_poll id=3]