K2kannadanews.in
Crime News ಸಿರವಾರ : ಆಕಸ್ಮಿಕವಾಗಿ ಬೆಂಕಿ (Accidental fire) ತಗುಲಿದ ಪರಿಣಾಮವಾಗಿ ಬಣವೆ (Stack) ಸಂಪೂರ್ಣವಾಗಿ ಸುಟ್ಟು (Burned) ಕರಕಲಾದ ಘಟನೆ ಚೌದ್ರಿ ಕ್ಯಾಂಪಿನಲ್ಲಿ (Chodri Camp) ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಸಿರವಾರ (Sirwara) ತಾಲ್ಲೂಕಿನ ಚೌದ್ರಿ ಕ್ಯಾಂಪಿನಲ್ಲಿ ಘಟನೆ ಜರುಗಿದೆ. ಅದೇ ಗ್ರಾಮದ ಪೆದ್ದಮ್ಮ ಹನುಮಂತಪ್ಪ (Hanumantappa) ಎಂಬುವವರಿಗೆ ಸೇರಿದ ಬಣವೆ ಎಂದು ತಿಳಿದು ಬಂದಿದೆ. ಕಾಲುವೆಯ ಪಕ್ಕದಲ್ಲಿ ಸಂಗ್ರಹಿಸಿಟ್ಟಿದ್ದ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರ ಪರಿಣಾಮವಾಗಿ ಬಣವೆ ಸುಟ್ಟು ಭಸ್ಮವಾಗಿದೆ.
ಅಗ್ನಿಶಾಮಕ (fire extinguisher) ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇವು ಸಂಗ್ರಹಿಸಿಟ್ಟಿದ್ದರು. ಸಾವಿರಾರು ರೂಪಾಯಿ ಖರ್ಚು ಮಾಡಿ ಹಾಕಿದ್ದ ಬಣವೆ ಹಾನಿಯಾಗಿದ್ದರಿಂದ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.
[ays_poll id=3]