K2kannadanews.in
dead body found canal ದೇವದುರ್ಗ : ಸ್ನೇಹಿತರೊಂದಿಗೆ (Friend’s) ಕಾರು ತೊಳೆಯಲು ಹೋಗಿದ್ದ ಯುವಕ ತುಂಗಭದ್ರಾ ಕಾಲುವೆಯಲ್ಲಿ (Thunga bhadra canal) ಕಾಲುಜಾರಿ ಬಿದ್ದು ಮೃತಪಟ್ಟ (Daid) ಘಟನೆ ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ಪಟ್ಟಣದ ಇಬ್ಬರು ಯುವಕರು ಕಾರು ತೊಳೆಯಲು (Car wash) ಮಾರ್ಚ 10 ಅಮವಾಸ್ಯೆಯಂದು ತುಂಗಭದ್ರಾ ಎಡದಂಡೆ ಕಾಲುವೆಗೆ ಹೋಗಿದ್ದರು. ಈ ವೇಳೆ ಹುಸೇನಪ್ಪ(Husenppa18) ಕಾಲು ಜಾರಿ ಬಿದ್ದು ಈಜು (Swimming) ಬಾರದ ಕಾರಣ ಕೊಚ್ಚಿ ಹೋಗಿದ್ದ. ಸ್ನೇಹಿತನನ್ನು ಕಾಪಾಡಲು ಹೋದ ದಿಲೀಪ್ (Dilip) ಹೆಚ್ಚು ನೀರು ಸೇವಿಸಿ ಅಸ್ವಸ್ಥತನಾಗಿದ್ದು ಆಸ್ಪತ್ರೆಗೆ (Hosptal) ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಹೆಗ್ಗಡದಿನ್ನಿ ಗ್ರಾಮದ ಕಾಲುವೆ ಬಳಿ ಕಾಲು ಜಾರಿ ಬಿದ್ದಿದ್ದ ಯುವಕನ ಶವಕ್ಕಾಗಿ ಶೋಧಕಾರ್ಯ ನಡೆಸಲಾಗಿತ್ತು.
ಸೋಮವಾರ (Monday) ಸಂಜೆ ದೇವದುರ್ಗ (Devadurga) ತಾಲ್ಲೂಕಿನ ಬಂಗಾರಪ್ಪ ಕೆರೆ ಬಳಿ ಶವ ದೊರೆತಿದೆ. ಘಟನೆಗೆ ಸಂಬಂದಿಸಿದಂತೆ ಗಬ್ಬೂರು ಪೊಲೀಸ್ (Gabburu police station) ಠಾಣೆಯಲ್ಲಿ ಯುಡಿಆರ್ ಪ್ರಕರಣ (UDR case) ದಾಖಲಾಗಿದೆ.
[ays_poll id=3]