This is the title of the web page
This is the title of the web page
Local News

ಮಾರಕ ರೋಗ ಎಚ್‌ಐವಿ ಜನ ಎಚ್ಚರಿಕೆಯಿಂದ ಇರಬೇಕು


ಸಿಂಧನೂರು : ಎಚ್‌ಐವಿ ಮಾರಕ ರೋಗವಾಗಿದ್ದು ಅದರಿಂದ ಜನ ಎಚ್ಚರಿಕೆಯಿಂದ ಇರಬೇಕು ಸ್ವಲ್ಪ ಯಾಮಾರಿದರೆ ಅಪಾಯ ಗ್ಯಾರಂಟಿ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಬಸಯ್ಯ ಜನರಿಗೆ ತಿಳಿವಳಿಕೆಯನ್ನು ನೀಡಿದರು.

ತಾಲ್ಲೂಕಿನ ಗಾಂಧಿನಗರ ಗ್ರಾಮದಲ್ಲಿ ಏರ್ಪಡಿಸಿದ್ದ. ಎಚ್‌ಐವಿ ಏಡ್ಸ್ ಕಾರ್ಯಕ್ರಮವನ್ನು ಹಲಗಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಏಡ್ಸ್ ಹೇಗೆ ಬರುತ್ತದೆ ಅದನ್ನು ತಡೆಗಟ್ಟುವ ಬಗ್ಗೆ ವಿವರವಾಗಿ ಜನರಿಗೆ ತಿಳಿಸಿದರು. ಪ್ರತಿವರ್ಷ ಡಿಸೆಂಬರ 1ರಂದು ಏಡ್ಸ್ ತಡೆಗಟ್ಟುವ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಏಡ್ಸ್ ತಡೆಗಟ್ಟುವ ಮೂಲಕ ಅಸಮಾನತೆಯನ್ನು ಹೋಗಲಾಡಿ ಸೋಣ ಎಂದು ತಾಲೂಕಾ ಕ್ಷೇತ್ರ ಆರೋಗ್ಯಾಧಿಕಾರಿ ಗೀತಾಹಿರೇಮಠ ಹೇಳಿದರು.

ಕಲಾ ತಂಡದವರಿಂದ ಜಾನಪದ ಹಾಡುಗಳನ್ನು ಹಾಡುವ ಮೂಲಕ ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಿದರು.


[ays_poll id=3]