This is the title of the web page
This is the title of the web page
Politics NewsState News

ಬಿ.ವಿ ನಾಯಕ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೆಂಬಲಿಗರಿಂದ ಆಕ್ರೋಶ


K2kannadanews.in

Election News ರಾಯಚೂರು : ಮಾಜಿ ಸಂಸದ (Ex.MP) ಬಿ.ವಿ ನಾಯಕ್ ಬಿಜೆಪಿ (BJP) ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೆಂಬಲಿಗರಿಂದ (Follower’s) ಬಿಜೆಪಿ ಪಕ್ಷದ ವಿರುದ್ಧ ಸಾಮಾಜಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ರಾಯಚೂರು (raichur) ಜಿಲ್ಲೆಯ ಮಾನ್ವಿಯಲ್ಲಿ (manvi) ತಡರಾತ್ರಿಯಿಂದ ಆಪ್ತರೊಂದಿಗೆ ಬಿ.ವಿ ನಾಯಕ್ ಆಪ್ತರ ಜೊತೆಗೆ ನಿರಂತರವಾಗಿ ಮಾಜಿ ಸಂಸದ ಬಿ.ವಿ ನಾಯಕ್ ಸಭೆ (Meeting) ಮಾಡುತ್ತಿದ್ದಾರೆ. ಇತ್ತ ಬಿ.ವಿ ನಾಯಕ್ ಬೆಂಬಲಿಗರು ಬಿಜೆಪಿ ಪಕ್ಷದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ (Social Media) ಆಕ್ರೋಶ ಹೊರಹಾಕಿದ್ದಾರೆ. ಬಿ.ವಿ ನಾಯಕರಿಗೆ (B V nayak) ಟಿಕೆಟ್ ನೀಡದ ಬಿಜೆಪಿ ಪಕ್ಷಕ್ಕೆ ತಿಲಂಜಲಿ, ರಾಜ್ಯ ಬಿಜೆಪಿ ನಾಯಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಪೊಸ್ಟ್ ಮಾಡುವ ಮೂಲಕ ಆಕ್ರೋಶ.

ಇನ್ನೂ ಅಭ್ಯರ್ಥಿ (Candidate) ರಾಜಾ ಅಮರೇಶ್ವರ ನಾಯಕ್ (Raja amreshwar nayak) ವಿರುದ್ಧವೂ ಆಕ್ರೋಶರಾಗಿದ್ದು, ಸಂಸದರಾಗಿದ್ದಾಗ ಒಂದು ದಿನವೂ ಸಾರ್ವಜನಿಕರನ್ನ (Public) ಭೇಟಿ ಮಾಡಿಲ್ಲ. ಕಳೆದ ಐದು ವರ್ಷಗಳಿಂದ ನಮ್ಮ ಸಂಸದರು ಕಾಣೆಯಾಗಿದ್ರು. ಕೊನೆಗೂ ಅವರನ್ನು ಹುಡುಕಿಕೊಟ್ಟ ಬಿಜೆಪಿ ಹೈಕಮಾಂಡ್ ಗೆ ಧನ್ಯವಾದ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.


[ays_poll id=3]