K2kannadanews.in
ದೇವದುರ್ಗ: ನರೆಗಾ(MNREG) ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ (Corruption) ನಡೆದಿದು, ರಾಜ್ಯ ಮಟ್ಟದಲ್ಲಿ ಸದ್ದು ಮಾಡಿದ್ದ ದೇವದುರ್ಗ(devadurga) ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ನಡೆದ 150 ಕೋಟಿಗೂ(core) ಅಧಿಕ ಮೊತ್ತದ ಭ್ರಷ್ಟಾಚಾರ ಪ್ರಕರಣದಲ್ಲಿ ವರದಿ ಆಧರಿಸಿ, ಜಿಲ್ಲಾ ಪಂಚಾಯಿತಿ ಸಿಇಒ(CEO) ನಾಲ್ವರು ಪಿಡಿಒಗಳನ್ನು ಅಮಾನತು(pdo suspend) ಮಾಡಿ ಆದೇಶ ಹೊರಡಿಸಿದ್ದಾರೆ.
ಹೌದು ರಾಜ್ಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಪರಿಶೀಲನೆ(State Social Audit Committee) ನಡೆದಿ ಸಲ್ಲಿಸಿದ ವರದಿಯಲ್ಲಿ ಅಕ್ರಮ ಉಲ್ಲೇಖಿಸಲಾಗಿದೆ. ವರದಿ(report) ಆಧರಿಸಿ ಜಾಲಹಳ್ಳಿ ಪಂಚಾಯಿತಿ ಪಿಡಿಒ ಪತ್ಯಪ್ಪ ರಾಥೋಡ, ಶಾವಂತಗೇರಾ ಪಂಚಾಯಿತಿ ಪಿಡಿಒ ಗುರುಸ್ವಾಮಿ, ಕ್ಯಾದಿಗೇರಾ ಪಂಚಾಯಿತಿ ಪಿಡಿಒ ಸಿ.ಬಿ. ಪಾಟೀಲ, ಗಾಣದಾಳ ಪಂಚಾಯಿತಿ ಪಿಡಿಒ ಮಲ್ಲಪ್ಪ ಅವರನ್ನು ಇಲಾಖೆ ವಿಚಾರಣೆ ಕಾಯ್ದಿಸಿರಿ ಅಮಾನತು ಮಾಡಲಾಗಿದೆ.
ಆದರೆ ದೇವದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳ ಪಿಡಿಒಗಳು ಜಿ.ಪಂ. ಅಧಿಕಾರಿಗಳ ನಿರ್ದೇಶನದಂತೆ ನಾವು ಕಾಮಗಾರಿ ಕೈಗೊಂಡಿದ್ದೇವೆ. ಅವರನ್ನು ಬಿಟ್ಟು ನಮ್ಮ ವಿರುದ್ಧವಷ್ಟೇ ಏಕೆ ಕ್ರಮ ಕೈಗೊಂಡಿದ್ದೀರಿ ಎಂದು ಅಮಾನತಾದ ಪಿಡಿಒಗಳು ಪ್ರಶ್ನಿಸಿದ್ದಾರೆ.
[ays_poll id=3]