This is the title of the web page
This is the title of the web page
Crime News

ಹೆತ್ತ ಮಗನಿಗೆ ಸುಪಾರಿ ನೀಡಿದ ತಾಯಿ..!


k2 ಕ್ರೈಂ ನ್ಯೂಸ್ : ಹೆತ್ತ ಮಗನನ್ನೇ ತಾಯಿ ಸುಪಾರಿ ನೀಡಿ ಕೊಲೆ ಮಾಡಿಸಿರುವ ಘಟನೆ ವಿಜಯಪುರದ ಗಾಂಧಿನಗರ ಬಳಿ ನಡೆದಿದೆ.

ಸುಪಾರಿ ಪಡೆದ ಆರೋಪಿಗಳು ಇನ್ನು ಮಲ್ಲಿಕಾರ್ಜುನನ್ನು ಹತ್ಯೆಗೈದು ವಿಜಯಪುರದ ಗಾಂಧಿನಗರ ಬಳಿಯ ಖಣಿಯಲ್ಲಿ ಎಸೆದು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಾಯಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ತಾಯಿ ಶ್ರೀದೇವಿ ಯಕ್ಕುಂಡಿ, ಪ್ರಕಾಶ ಗೊಲ್ಲರ್, ರಾಹುಲ್ ಗೊಲ್ಲರ್, ರಾಘವೇಂದ್ರ ಸಾಠ, ಸಂತೋಷ ಬಿದರಿ ಬಂಧಿತ ಆರೋಪಿಗಳು. ಇನ್ನು ಮಲ್ಲಿಕಾರ್ಜುನ ಯಕ್ಕುಂಡಿ ಮೃತಪಟ್ಟಿರುವ ದುರ್ದೈವಿ.

ನೀಡಿದ ಘಟನೆ ಹಿನ್ನೆಲೆ ನೋಡಿದಾಗ ದಿನನಿತ್ಯ ಕುಡಿದ ನಶೆಯಲ್ಲಿ ತಾಯಿ ಶ್ರೀದೇವಿಗೆ ಮಗ ಮಲ್ಲಿಕಾರ್ಜುನ ಕಿರುಕುಳ ನೀಡುತ್ತಿದ್ದನು. ಅದೆಷ್ಟೇ ಹೇಳಿದರು ಕುರಿತವನ್ನು ಮಾತ್ರ ತ್ಯಜಿಸಿರಲಿಲ್ಲ. ಇದೇ ವಿಷಯಕ್ಕೆ ಶ್ರೀದೇವಿ ಮಗನ ದಬ್ಬಾಳಿಕೆಗೆ ಬೇಸತ್ತು, ಮಗನ ಹತ್ಯೆಗೆ ಸುಪಾರಿ ನೀಡಿದ್ದಳು. ಈ ಕುರಿತು ವಿಜಯಪುರ ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]