K2kannadanews.in
ರಾಯಚೂರು : ಆಸ್ಪತ್ರೆಗೆ ( hospital) ತೆರಳಿದ್ದ ತಾಯಿ ಮತ್ತು ಮಗನ ( mother& son) ಮೇಲೆ ಬೀದಿ ನಾಯಿ ದಾಳಿ (street dog attack) ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಸಿಂಧನೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು (sindhanur) ಪಟ್ಟಣದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದವರ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ತಾಯಿ ಮತ್ತು ಮಗನಿಗೆ ಗಂಭೀರ ಗಾಯಗಳಾಗಿವೆ.
ಸಿಂಧನೂರಿನ ಆದರ್ಶ ಕಾಲೋನಿಯ (Adarsha colony) ಅಕ್ಕಮಹಾದೇವಿ ಆಸ್ಪತ್ರೆ ಬಳಿ ಘಟನೆ ನಡೆದಿದ್ದು, ಮಗ ಮತ್ತು ತಾಯಿ ಇಬ್ಬರಿಗೂ ಮನಬಂದಂತೆ ಬೀದಿ ನಾಯಿ ಕಚ್ಚಿದೆ. ಸಿಂಧನೂರು ಠಾಣೆ ಪೇದೆ ಶರಣ ರೆಡ್ಡಿ ಪತ್ನಿ ಮಗನ ಮೇಲೆ ನಾಯಿ ದಾಳಿ ನಡೆಸಿದ್ದು,
ಪೇದೆ ಮಗ ಪ್ರೀತಂ (preetam) ತೊಡೆ ಭಾಗಕ್ಕೆ ಕಚ್ಚಿದ ನಾಯಿ, ಬಳಿಕ ಬಿಡಿಸಲು ಹೋದ ತಾಯಿಯ ಕೈಗೂ ಕಚ್ಚಿದೆ.
ಆ ಬಳಿಕ ಸಾರ್ವಜನಿಕರಿಂದ ನಾಯಿ ಮೇಲೆ ಕಲ್ಲಿನಿಂದ ದಾಳಿ ನಡೆಸಿ ನಾಯಿಯಿಂದ ತಾಯಿ ಮಗುವಿನ ರಕ್ಷಿಸಿದ್ದಾರೆ. ಗಾಯಾಳುಗಳಿಗೆ ಸಧ್ಯ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಬೀದಿ ನಾಯಿ ದಾಳಿಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರದಲ್ಲಿ (CC camera) ಸೆರೆಯಾಗಿದ್ದು. ಬೀದಿ ನಾಯಿ ಉಪಟಳಕ್ಕೆ ಸಿಂಧನೂರಿನ ಜನ ಬೇಸತ್ತಿದ್ದು, ಮಾಂಸದಂಗಡಿಗಳ ಮುಂದೆ ಗುಂಪಾಗಿ ಸೇರುವ ನಾಯಿಗಳು, ಮಾಂಸದ ರುಚಿ ನೋಡಿ ಮಹಿಳೆ, ಮಕ್ಕಳ ಮೇಲೆ ನಿರಂತರ ದಾಳಿ ಮಾಡುತ್ತಿದೆ ಎನ್ನುವ ಆರೋಪ ಬಲವಾಗಿ ಕೇಳಿಬರುತ್ತಿದೆ. ಈ ಕುರಿತು ನಗರಸಭೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕ್ತಿರೋ ನಾಗರೀಕರು ಬೀದಿ ನಾಯಿಗಳಿಂದ ರಕ್ಷಣೆ ಕುರಿತಾಗಿ ಪೊಲೀಸರ ಮೊರೆ ಹೋಗಿದ್ದಾರೆ.
[ays_poll id=3]