ಅನುಕಂಪ ಗಿಟ್ಟಿಸಿಕೊಳ್ಳಲು ಶಾಸಕರು ಸುಳ್ಳು ಹೇಳುತ್ತಿದ್ದಾರೆ : ಶ್ರೀದೇವಿ ನಾಯಕ್..
K2kannadanews.in
lying to gain sympathy ರಾಯಚೂರು : ದೇವದುರ್ಗ ತಾಲೂಕಿನಲ್ಲಿ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿರುವ ಘಟನೆ ಕುಲಂಕುಷವಾಗಿ ಚರ್ಚಿಸಬೇಕು ಮತ್ತು ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಮಹಿಳಾ ಘಟಕದ ಕಾಂಗ್ರೆಸ್ ಜಿಲ್ಲಾದ್ಯಕ್ಷರಾದ ಶ್ರೀದೇವಿ ನಾಯಕ್ ಆಗ್ರಹಿಸಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನದಭೆ ಕ್ಷೇತ್ರದ ಶಾಸಕರಾದ ಕರಿಯಮ್ಮ ನಾಯಕ ಅವರು ಚುನಾವಣೆಯಲ್ಲಿ ಗೆದ್ದು ಬಂದ ನಂತರ ಅಕ್ರಮ ಮರಳು, ಮಟಕಾ ದಂದೆ ನಿಲ್ಲಿಸುವುದಾಗಿ ಹೇಳಿದ್ದರು, ವಿಧಾನಸೌಧದಲ್ಲಿ ದ್ವನಿ ಎತ್ತಿದ್ದರು. ಇದೀಗ ಕ್ಷೇತ್ರದ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಕ್ಷೇತ್ರದಲ್ಲಿ ಅಧಿಕಾರಿಗಳು ನನಗೆ ಸಹಕರಿಸುತ್ತಿಲ್ಲ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಾರೆ. ಈಗ ನೋಡಿದರೆ ತನ್ನ ಸ್ವಂತ ಮಗನೇ ಅಕ್ರಮ ಕಡೆಯಿಂದಲೇ ಮರಳುಗಾರಿಕೆ ಮಾಡಿಸುತ್ತಿದ್ದಾರೆ. ಮ್ಯಾದರ್ಗೋಳ ಎಂಬ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ಕರಿಯಮ್ಮ ಅವರ ಪುತ್ರನ ನೇತೃತ್ವದಲ್ಲಿ ನಡೆಯುತ್ತಿದೆ. ಅಕ್ರಮ ಮುಳ್ಳುಗಾರಿಕೆ ಇತರೆ ಅಕ್ರಮಗಳನ್ನು ತಡೆಯುತ್ತೇನೆ ಎಂದು ಚುನಾವಣೆಗೊ ಮುಂಚೆ ಮಗನ ಮೇಲೆ ಆಣೆ ಮಾಡಿ ಹೇಳಿದರು. ಈಗ ನೋಡಿದರೆ ಕ್ಷೇತ್ರದ ಅತ್ಯಂತ ಅಕ್ರಮ ಅವರ ಕಡೆಯಿಂದಲೇ ಆಗುತ್ತಿದೆ.
ಜೆಡಿಎಸ್ ಬ್ಲಾಕ್ ಅಧ್ಯಕ್ಷರಾದ ರೇಣುಕಾ ಅವರ ಪತಿಯೇ ದೇವದುರ್ಗದಲ್ಲಿ ನಡೆಯುವ ಮಟಕ ದಂದ್ದೆಯ ಕಿಂಗ್ ಪಿನ್ ಆಗಿದ್ದಾರೆ. ಜನಸಾಮಾನ್ಯರನ್ನು ರಕ್ಷಣೆ ಮಾಡುವ ಪೊಲೀಸ್ ಪೇದೆಯ ಮೇಲೆ ಹಲ್ಲೆಯಾದರೆ ಜನಗಳ ರಕ್ಷಣೆ ಯಾರು ಮಾಡಬೇಕು ಎಂದು ಪ್ರಶ್ನಿಸಿದರು. ಈ ಒಂದು ಘಟನೆ ಬಗ್ಗೆ ಸಮಗ್ರ ತನಿಖೆಯಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
[ays_poll id=3]