K2kannadanews.in
(Crime News)ರಾಯಚೂರು : ಜಿಲ್ಲೆಯ ಸಿಂಧನೂರಿನ ಪಿಡಬ್ಲೂಡಿ ಕ್ಯಾಂಪ್(PWD Camp) ಬಳಿ ಭತ್ತದ (Pady) ಚೀಲ ತುಂಬಿದ್ದ ಲಾರಿ (lorry) ಪಲ್ಟಿಯಾಗಿದ್ದು ಚಾಲಕ (Driver) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಯಾದಗಿರಿಯ ಕೆಂಬಾವಿಯಿಂದ ಕೊಪ್ಪಳದ ಕಾರಟಗಿಗೆ ಹೊರಟಿದ್ದ ಭತ್ತ ತುಂಬಿದ ಲಾರಿ ಪಲ್ಟಿಹೊಡೆದಿದೆ.
ಪಿಡಬ್ಲ್ಯೂಡಿ ಕ್ಯಾಂಪ್ ಬಳಿ ಕಿರು ಸೇತುವೆ ತಡೆಗೋಡೆಗೆ ಡಿಕ್ಕಿಹೊಡೆದ ಪರಿಣಾಮ ಅಪಘಾತವಾಗಿದೆ. ಪಾನಮತ್ತನಾಗಿದ್ದ ಚಾಲಕನ (Drink and drive) ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಚಾಲಕ ಪಾರಾಗಿದ್ದಾನೆ. ರಸ್ತೆ ತುಂಬಾ ಭತ್ತದ ಚೀಲಗಳು ಬಿದ್ದಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು. ಸಿಂಧನೂರು ಸಂಚಾರಿ ಪೊಲೀಸ್ ಠಾಣೆ (Traffic police station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಹೆಚ್ಚು ಪ್ರಮಾಣದ ಭತ್ತವನ್ನ ಮಾರುಕಟ್ಟೆಗೆ ತಲುಪಿಸುವ ಧಾವಂತದಲ್ಲಿ ಲಾರಿಗಳಿಗೆ ಓವರ್ ಲೋಡ್ ಮಾಡಲಾಗುತ್ತಿದ್ದು, ಜಿಲ್ಲೆಯ ಹಲವೆಡೆ ಭತ್ತದ ಲಾರಿಗಳು ಪಲ್ಟಿ ಹೊಡೆದಿರುವ ಘಟನೆಗಳು ನಡೆದಿವೆ.
[ays_poll id=3]