K2kannadanews.in
Accident news ರಾಯಚೂರು : ಲಾರಿ ಬೈಕ್ ನಡುವೆ ಅಪಘಾತ (Lorry Bike accident) ಸಂಭವಿಸಿ ಬೈಕ್ ಸವಾರನೋಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಹೇಗಸನಹಳ್ಳಿ ಗ್ರಾಮದ ಬಳಿಯ ಹೆದ್ದಾರಿಯಲ್ಲಿ (Highway) ನಡೆದಿದೆ.
ಹೌದು ರಾಯಚೂರು (Raichur) ತಾಲೂಕಿನ ಹೇಗಸನಹಳ್ಳಿ (hegasanlli) ಗ್ರಾಮದ ಬಳಿ ಹೋಗಿರುವ ರಾಯಚೂರು ಹೈದರಾಬಾದ್ (Raichur- hyderabad) ಹೆದ್ದಾರಿಯಲ್ಲಿ ಲಾರಿ ಒಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಂಭೀರವಾಗಿ (injured) ಗಾಯಗೊಂಡಿದ್ದು ಗಾಯಾಳುವನ್ನು ರಿಮ್ಸ್ (Rims hospital) ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ರಸ್ತೆ ಮಧ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯ ಸಹಾಯಕ್ಕೆ ಯಾವುದೇ ಸಾರ್ವಜನಿಕರು ಹೋಗದೆ ಇರುವುದು ನಿಜಕ್ಕೂ ಒಂದು ಮಾನವೀಯತೆಗೆ ಬೆಲೆ ಇಲ್ಲ ಎಂಬುದು ತೋರಿಸುತ್ತಿತ್ತು.
ಘಟನೆ ಬಗ್ಗೆ ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಗೆ (rural police station) ಮಾಹಿತಿ ದೊರೆತಿದ್ದಂತೆ ಸ್ಥಳಕ್ಕೆ ದಾವಿಸಿದ ಪೊಲೀಸರು ಗಾಯಾಳವನ್ನು ರಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಸಂಬಂಧಿಕರು ನಾಳೆ ಪ್ರಕರಣ ದಾಖಲಿಸುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
[ays_poll id=3]