ರಾಯಚೂರು : ಲೊಕೊ ಪಾಯ್ಲೆಟ್ ಡೆಮೋ ಟ್ರೈನ್ ಚಾಲಕನ ಸಮಯಪ್ರಜ್ಞೆಯಿಂದ ರಾಯಚೂರು ಬಳಿ ಇರುವ ಆಂದ್ರದ ಕೃಷ್ಣ ರೈಲು ನಿಲ್ದಾಣದಲ್ಲಿ ಅನಾಹುತ ತಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು ಕಾಚಿಗೂಡದಿಂದ ರಾಯಚೂರು ಕಡೆಗೆ ಬರುತ್ತಿದ್ದ ಡೆಮೋ ರೈಲು, ಕೃಷ್ಣ ರೈಲು ನಿಲ್ದಾಣದ ಬಳಿ ಆಗಮಿಸಿದ ವೇಳೆ, ರೈಲ್ವೆ ಟ್ರ್ಯಾಕ್ ಡಿವೈಡರ್ ಬಳಿ ಹಳಿ ಕಟ್ ಆಗಿರುವ ವಿಚಾರ ತಿಳಿದಿದೆ. ವಿಷಯ ತಿಳಿದು ಎಚ್ಚೆತ್ತ ಲೋಕೋ ಪೈಲೆಟ್ ರೈಲು ನಿಧಾನವಾಗಿ ಅಲ್ಲಿಂದ ದಾಟಿಸಿ ತದನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.
ಕೂಡಲೇ ಎಚ್ಚೆತ್ತ ರಾಯಚೂರು ವಿಭಾಗದ ಅಧಿಕಾರಿಗಳು 3 ಗಂಟೆಗಳ ಕಾಲ ಸತತ ಪ್ರಯತ್ನದಿಂದ ರೈಲ್ವೆ ಟ್ರ್ಯಾಕ್ ಸರಿಪಡಿಸಿದ್ದಾರೆ. ಒಂದು ವೇಳೆ ಘಟನೆ ಬೆಳಕಿಗೆ ಬಾರದೆ ಹೋಗಿದ್ದರೆ, ಭಾರಿ ಅನಾಹುತ ಒಂದು ನಡೆಯುತ್ತಿತ್ತು. ಆ ಒಂದು ಅನಾಹುತ ತಪ್ಪಿದಂತಾಗಿದೆ.
[ays_poll id=3]