K2kannadanews.in
leopard killed calf ದೇವದುರ್ಗ : ತೋಟದ ಮನೆಯಲ್ಲಿ (Farmhouse) ಕಟ್ಟಿಹಾಕಿದ್ದ ಆಕಳು ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದ ಘಟನೆ ಜಾಲಹಳ್ಳಿ (jalahalli) ಗ್ರಾಮದ ಹೊರವಲಯದಲ್ಲಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಜಾಲಹಳ್ಳಿ ಗ್ರಾಮದ ಮುದ್ದುರಂಗಪ್ಪ (Muddurangappa) ಎಂಬುವವರಿಗೆ ಸೇರಿದ ಆಕಳು ಕರು. ರಾತ್ರಿ ದಾಳಿ (Last night) ನಡೆಸಿರುವ ಚಿರತೆ ಕೊಂದು ಅರ್ಧ ತಿಂದು ಓಡಿಹೋಗಿದೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ (Forest Deportment) ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಜಮೀನಿನಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತುಗಳು (Footprints) ಪತ್ತೆಯಾಗಿದ್ದು, ಚಿರತೆ ಸೆರೆಗೆ ಮುಂದಾಗಿದ್ದಾರೆ ಅರಣ್ಯಾಧಿಕಾರಿಗಳು.
ಇನ್ನು ಘಟನೆ ನಡೆಯುತ್ತಿದ್ದಂತೆ ಜಾಲಹಳ್ಳಿ ಗ್ರಾಮದಲ್ಲಿ ಭಯದ (Fear) ವಾತಾವರಣ ಉಂಟಾಗಿದ್ದು, ಜನರು ಊರ (Villege) ಹೊರಗಿನ ಹೊಲಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಆದಷ್ಟು ಬೇಗ ಅರಣ್ಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
[ays_poll id=3]