ಮಾನ್ವಿ : ಗದ್ದೆಗೆ ನೀರು ಕಟ್ಟಲು ಹೊಗುತ್ತಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾದ ಘಟನೆಗೆ ಸಂಬಂದಿಸಿದಂತೆ ಮೂರು ಆರೋಪಿಗಳನ್ನು ಮಾನ್ವಿ ಪೊಲೀಸರು ಬಂದಿದಿದ್ದಾರೆ.
ಹೌದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮದ್ಲಾಪುರ ಗ್ರಾಮದಲ್ಲಿ ರಾಜಕೀಯ ಮುಖಂಡ ಪ್ರಸಾದ ಮದ್ಲಾಪುರ ಹತ್ಯೆ ಪ್ರಕರಣದಲ್ಲಿ ಬಾಗಿಯಾದ ಮೂವರು ಆರೋಪಿಗಳನ್ನು ಮಾನ್ವಿ ಪೊಲೀಸರು ಸಿಂಧನೂರಿನ ಸುಕಾಲಪೇಟೆಯಲ್ಲಿ ಬಂಧಿಸಿದ್ದಾರೆ. ರಬ್ಬಣಕಲ್ ಗ್ರಾಮದ ಕೇಶವ ನರಸಪ್ಪ, ರಾಮ ನರಸಪ್ಪ ಹಾಗೂ ದೇವರೆಡ್ಡಿ ಕಿಷ್ಟಪ್ಪ ಬಂಧಿತರು.
ಮಾನ್ವಿ ಠಾಣೆಯ ಇನ್ಸ್ಪೆಕ್ಟರ್ ವಿ.ಎಸ್.ಹಿರೇಮಠ ಅವರ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂದಿತರನ್ನು ಮಾನ್ವಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
[ays_poll id=3]