K2 ನ್ಯೂಸ್ ಡೆಸ್ಕ್ : ಕಾಡು ಹಂದಿ ಓಡಿಸಲು ಇಟ್ಟಿದ್ದ ನಾಡಬಾಂಬ್ ಹಸು ತಿಂದ ವೇಳೆ ಸ್ಪೋಟಗೊಂಡ ಪರಿಣಾಮ ಹಸುವಿನ ಬಾಯಿ ಛಿದ್ರ ಛಿದ್ರವಾದ ಘಟನೆ ಹರವದಿ ಗ್ರಾಮದಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಹರವದಿ ಗ್ರಾಮದಲ್ಲಿ ಈ ಅವಘಡ ನಡೆದಿದ್ದು, ಎತ್ತಿನ ಬಾಯಿಯಲ್ಲಿ ನಾಡ ಬಾಂಬ್ ಸ್ಪೋಟಗೊಂಡು ಛಿದ್ರಗೊಂಡಿದ್ದರಿಂದ ತೀವ್ರ ನರಳಾಟ ಅನುಭವಿಸಿದೆ. ರೈತ ಮಲಿಯಪ್ಪ ಎಂಬುವರಿಗೆ ಸೇರಿದ ಎತ್ತು ತೀವ್ರ ನರಳಾಟವನ್ನು ಅನುಭವಿಸುತ್ತಿದೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹರವದಿ ಗ್ರಾಮವು ಅರಣ್ಯ ಪ್ರದೇಶ ಪಕ್ಕದಲ್ಲಿದೆ. ಹೀಗಾಗಿ ಕಾಡಿನಿಂದ ಹಂದಿಗಳು ಬಂದು ಕಾಟ ನೀಡುತ್ತಿದ್ದವು. ಹೀಗಾಗಿ ನಾಡಬಾಂಬ್ ಇಡಲಾಗಿತ್ತು ಎನ್ನಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
[ays_poll id=3]