K2kannadanews.in
Political News ರಾಯಚೂರು : ನನ್ನ ರಾಜಕೀಯವಾಗಿ (Politically) ಮುಗಿಸಬೇಕು ಎಂದು ಹಿತ ಶತ್ರುಗಳು (Good enemies), ಮ್ಯಾಚ್ ಫಿಕ್ಸಿಂಗ್ (Match fixing) ಮಾಡಿಕೊಂಡು ನನ್ನ ಟಿಕೆಟ್ ತಪ್ಪಿಸಿದ್ದಾರೆ ಎಂದು ಟಿಕೆಟ್ ವಂಚಿತ ಮಾಜಿ ಸಂಸದ ಬಿ.ವಿ ನಾಯಕ್ (B.V Nayak) ಅವರು ಬಿಜೆಪಿ ಕೆಲ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಹೌದು ರಾಯಚೂರಿನಲ್ಲಿ (Raichur) ಮಾತನಾಡಿದ ಅವರು, ಮಾಜಿ ಸಂಸದ ಬಿ.ವಿ ನಾಯಕ್ ತಮಗೆ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ (Ticket miss) ಆಗಿದ್ದಕ್ಕೆ ತೀರ್ವ ಬೇಸರ ವ್ಯಕ್ತಪಡಿಸಿದ್ದಾರೆ. ರಾಜಕೀಯವಾಗಿ ಬಹಳಷ್ಟು ಹಿತಶತ್ರುಗಳು ನಮ್ಮೊಂದಿಗೆ ಇದ್ದಾರೆ.
ಹಿಂದೆ ನಾನು ಕಾಂಗ್ರೆಸ್ ಪಕ್ಷದಲ್ಲಿ (Congress party) ಇರುವಾಗಲೂ ರಾಜಕೀಯವಾಗಿ ಮುಗಿಸಲು ಷಡ್ಯಂತರ ಮಾಡಿದ್ದರು ಅದರ ಮುಂದುವರಿದ ಭಾಗವಾಗಿ ಇಂದು ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಅನೌನ್ಸ್ (Anonce) ಆಗಿದ್ದು ನೋಡಿದರೆ ಎಲ್ಲೋ ಒಂದು ಕಡೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಅನಿಸುತ್ತದೆ ಇದು ನನಗೆ ಬೇಸರ ತಂದಿದೆ ಎಂದು ಅಸಮಾಧಾನ ಹೊರಹಾಕಿದರು.
[ays_poll id=3]