K2kannadanews.in
Crime ನ್ಯೂಸ್ : ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ (silly reason) ಕಾರಣಗಳಿಗೆ ಕೊಲೆಗೆಳೆ (murder) ಜರುಗುತ್ತಿವೆ. ಗಂಡ ಹೆಂಡತಿ (hasbend wife) ಮಧ್ಯ ಸಾಮರಸ್ಯ ಕುಗ್ಗಿ ಜಗಳಗಳೆ (fight) ಹೆಚ್ಚುತ್ತಿವೆ. ಅಂತದ್ದೆ ಘಟನೆ ನಡೆದಿದ್ದು ಮೊಬೈಲ್ ರಿಚಾರ್ಜ್(mobile recharge) ವಿಚಾರಕ್ಕೆ ಶುರುವಾರ ಗಲಾಟೆ ಪತ್ನಿಯ ಕೊಲೆಯಲ್ಲಿ( wife murder) ಅಂತ್ಯವಾಗಿರುವ ಘಟನೆ ದೇಶವಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಡ್ಯ(Mandy) ಜಿಲ್ಲೆಯ ಮಳವಳ್ಳಿ (malavalli) ತಾಲೂಕಿನ ದೇಶವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೊಬೈಲ್ ರಿಚಾರ್ಜ್ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಜಗಳ ತಾರಕಕ್ಕೇರಿದ್ದು ಕೋಪಗೊಂಡ ಮಹದೇವ್, ರಾಡ್ನಿಂದ (rad) ಹೊಡೆದು ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧುಶ್ರೀ(32) (madhusri) ಮೃತ ದುರ್ದೈವಿ ಪತ್ನಿ. ಮಹದೇವ್(38) (mahadev) ರಾಡ್ನಿಂದ ಹೊಡೆದು ಪತ್ನಿಯನ್ನು ಕೊಲೆಗೈದಿರುವ ಪಾಪಿ ಪತಿ. ಕೊಲೆ ಬಳಿಕ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ (surrendered police). ಇಬ್ಬರ ಜಗಳದಲ್ಲಿ ಮಗು ಅನಾಥವಾಗಿದ್ದು (child orphanl), ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಮಧುಶ್ರೀ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಆರೋಪಿ ಮಹದೇವ್ ಚಾಲಕನಾಗಿದ್ದನು. ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಮಹದೇವ್, ಇದೇ ವಿಚಾರಕ್ಕೆ ಆಗಾಗ ಗಲಾಟೆ ಮಾಡುತ್ತಿದ್ದನು. ಇದರಿಂದ ಮನನೊಂದು ಮಧುಶ್ರೀ ತಾಯಿಯ (ತವರು) ಮನೆಯಲ್ಲಿ ಇದ್ದರು. ಬಳಿಕ ಹಿರಿಯರು ರಾಜಿ ಪಂಚಾಯಿತಿ ಮಾಡಿ ಎರಡು ತಿಂಗಳ ಹಿಂದೆ ಪುನಃ ಪತಿ ಮಹದೇವ್ ಮನೆಗೆ ಬಂದಿದ್ದರು. ಮತ್ತೆ ಹಳೆ ಚಾಳಿಯನ್ನು ಮುಂದುವರಿಸಿದ್ದ ಆರೋಪಿ ಆಕೆಯನ್ನು ಕೊಲೆಗೈದಿದ್ದಾನೆ.
[ays_poll id=3]