This is the title of the web page
This is the title of the web page
Crime NewsLocal News

ಸಿಂಗನೋಡಿ : ಪತ್ನಿಯಿಂದಲೇ ಕೊಲೆಯಾಗಿದ ಬಿಜೆಪಿಯ ಮಾಜಿ ತಾಲೂಕು ಪಂಚಾಯತಿ ಸದಸ್ಯ..


K2kannadanews.in

Crime News ರಾಯಚೂರು : ಪತ್ನಿಯೊಬ್ಬಳು (Wife) ಮದ್ಯದಲ್ಲಿ ನಿದ್ರೆ (sleeping tablet) ಮಾತ್ರೆ ಹಾಕಿ, ಕತ್ತು ಹಿಸುಕಿ‌ ಕೊಲೆ (Murder) ಮಾಡಿದ ಘಟನೆಯೊಂದು ಸಿಂಗನೋಡಿ ತಾಂಡಾದಲ್ಲಿ ಈ ಘಟನೆ ನಡೆದಿದ್ದು, ಪತಿಯನ್ನು ಕೊಲ್ಲಲು ಕಾರಣ ಕೇಳಿದರೆ ನೀವು ಪತ್ನಿಗೆ ಹಿಡಿ ಶಾಪ ಹಾಕ್ತೀರಾ..!

ಹೌದು ರಾಯಚೂರು (Raichur) ತಾಲೂಕಿನ ಸಿಂಗನೋಡಿ ತಾಂಡದಲ್ಲಿ (Singanodi tahnda) ಘಟನೆ ನಡೆದಿದೆ. ಗ್ರಾಮಕ್ಕೆ ದೇವಸ್ಥಾನದ (Temple) ಗೋಪುರ ಕಟ್ಟಲು ಬಂದಿದ್ದ ಮಹಾರಾಷ್ಟ್ರ (Maharashtra) ಮೂಲದ ವ್ಯಕ್ತಿ ಜತೆಗೆ ಸ್ನೇಹಾ ಸಲುಗೆಯನ್ನು ಬೆಳೆಸಿದ್ದಳು ಎನ್ನಲಾಗುತ್ತಿದೆ. ಸ್ನೇಹಾ ಆತನೊಟ್ಟಿಗೆ ಅಕ್ರಮ ಸಂಬಂಧ (Illegal relationship) ಹೊಂದಿದ್ದಳು. ಕದ್ದು ಮುಚ್ಚಿ ಆತನೊಟ್ಟಿಗೆ ಸೇರುತ್ತಿದ್ದಳು ಎಂಬ ಆರೋಪವಿದೆ. ಆದರೆ ಇದು ಪತಿ (Hasband) ರಾಜು ನಾಯಕಗೆ ತಿಳಿದುಹೋಯಿತು. ಹೆಂಡತಿ ವಿಷಯ ಊರಿನವರಿಗೆ ತಿಳಿದರೆ ಮಾನ ಮಾರ್ಯಾದೆ (prestige) ಹೋಗುತ್ತೆದೆ ಎಂದು ರಾಜು, ತನ್ನ ಪತ್ನಿಗೆ ಬುದ್ಧಿವಾದ ಹೇಳಿದ್ದ. ಆದರೂ ಸ್ನೇಹಾ ತನ್ನ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಳು.

ಇದೇ ವಿಚಾರಕ್ಕೆ ಇವರಿಬ್ಬರ ಮಧ್ಯೆ ಕಳೆದ 2 ವರ್ಷಗಳಿಂದ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ದಂಪತಿ ಮಧ್ಯೆ ಇದೇ ವಿಷಯಕ್ಕೆ ಜಗಳ (fight with couple) ನಡೆದಿತ್ತು. ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಕ್ಕೆ ಸ್ನೇಹಾ ಆತನನ್ನು ಮುಗಿಸಿಬಿಡುವ ಪ್ಲ್ಯಾನ್‌ (plan) ಮಾಡಿದ್ದಳು. ಅದಕ್ಕೆ ಪತಿಗಿದ್ದ ಕುಡಿತವನ್ನೇ ಬಂಡವಾಳ ಮಾಡಿಕೊಂಡ ಸ್ನೇಹ, ಮದ್ಯದಲ್ಲಿ (Liquor) ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದಳು. ಅದನ್ನೂ ಕುಡಿಯುತ್ತಿದ್ದಂತೆ ರಾಜು ನಿದ್ರೆಗೆ ಜಾರಿದಾಗ ಕತ್ತು ಹಿಸುಕಿ‌ ಕೊಲೆ ಮಾಡಿದ್ದಾಳೆ.

ಇದೇ ವಿಚಾರಕ್ಕೆ ಕೊಲೆಯಾದ ವ್ಯಕ್ತಿಯ ಅಣ್ಣನ ಮಗ ಮಾಧ್ಯಮದವರೊಂದಿಗೆ (Media) ಮಾತನಾಡಿ. ಪತ್ನಿಯ ಜೊತೆಗೆ ಇನ್ನೂ ಮೂರು, ನಾಲ್ಕು ಜನ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ ವ್ಯಕ್ತಿ ಮತ್ತು ಇದೇ ತಾಂಡದ ಇಬ್ಬರೂ ವ್ಯಕ್ತಿಗಳು ಹಾಗೂ ಬೇರೆ ತಾಂಡದ ಇಬ್ಬರು ವ್ಯಕ್ತಿಗಳು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಸೂಕ್ತ ತನಿಖೆ (investigation) ನಡೆಸಿ ಆರೋಪಿಗಳ ಮೇಲೆ ಕಾನೂನು ಕ್ರಮಕೈಗೊಂಡು ಶಿಕ್ಷೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣಾ (yapaladinni police sration) ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


[ays_poll id=3]