This is the title of the web page
This is the title of the web page
Politics NewsState NewsVideo News

ಚಿಂತನ ಸಭೆಯಲ್ಲಿ ಪ್ರತಿದ್ವನಿಸಿದ ಗೊ ಬ್ಯಾಕ್ ಅಮರೇಶ್ವರ ನಾಯಕ್..


K2kannadanews.in

Go back ರಾಯಚೂರು : ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿ ವಿ ನಾಯಕ್ ಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆ ಕಾರ್ಯಕರ್ತರ ಅಸಮಾಧಾನ ಬುಗಿಲೆದ್ದಿದೆ. ಮುಂದಿನ ನಡೆ ಬಗ್ಗೆ ಕರೆಯಲಾಗಿದ್ದ ಚಿಂತನ ಸಭೆಯಲ್ಲಿ ಮತ್ತೆ ಪ್ರತಿದ್ವನಿಸಿದ ಗೊ ಬ್ಯಾಕ್ ಅಮರೇಶ್ವರ ನಾಯಕ್.

ಅದು ರಾಯಚೂರು ರಾಯಚೂರು ಹಬ್ ನಲ್ಲಿ ಇಂದು ಬಿವಿ ನಾಯಕ್ ಅವರಿಗೆ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆ, ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಜನತೆಯ ಜನತಾ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳ ಚಿಂತನಾ ಸಭೆ ಮಾಡಲಾಗುತ್ತಿದೆ. ಕಾರ್ಯಕ್ರಮದ ಮದ್ಯದಲ್ಲಿ ಬಂದ ಯುವ ಕಾರ್ಯಕರ್ತರು, 5 ವರ್ಷಗಳ ಹಿಂದೆ ಕಾಣೆಯಾಗಿದ್ದ ಸಂಸದರನ್ನ ಹುಡುಕಿಕೊಟ್ಟ ಬಿಜೆಪಿ ಹೈಕಮಾಂಡ್ ಗೆ ಧನ್ಯವಾದ, ಎಂದು ಬರೆದ ಬ್ಯಾನರ್ ಹಿಡಿದು ಗೊ ಬ್ಯಾಕ್ ಅಮರೇಶ್ವರ ನಾಯಕ ಎಂದು ಘೋಷಣೆ ಹಾಕಿದರು. ಈ ಒಂದು ಘೋಷಣೆಗೆ ನೆರೆದ ಎಲ್ಲಾ ಕಾರ್ಯಕರ್ತರು ಗೊ ಬ್ಯಾಕ್ ಅಮರೇಶ್ವರ ನಾಯಕ ಎಂದು ಘೋಷಣೆ ಕೂಗಿದರು.


[ays_poll id=3]