K2kannadanews.in
Political News ರಾಯಚೂರು : ಕಾಂಗ್ರೆಸ್ (congress) ಅಭ್ಯರ್ಥಿ ಬಳಿಕ ಇದೀಗ ಬಿಜೆಪಿ (BJP) ಅಭ್ಯರ್ಥಿಗೆ ಗೋ ಬ್ಯಾಕ್ (Go back campan) ಬಿಸಿ ತಟ್ಟಿದೆ. ಬಿಜೆಪಿ ಹಾಲಿ ಸಂಸದ, ಅಭ್ಯರ್ಥಿ ವಿರುದ್ದ ಅಸಮಧಾನ, ಕಾರ್ಯಕರ್ತರಿಂದಲೇ ಗೋ ಬ್ಯಾಕ್ ಅಮರೇಶ್ವರ್ ನಾಯಕ್ ಘೋಷಣೆ ಹಾಕಿದ್ದು ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌದು ರಾಯಚೂರು (Raichur) ಲೋಕಸಭೆ ಕ್ಷೇತ್ರದ ಟಿಕೆಟ್ ಕೈ (Ticket miss) ತಪ್ಪಿದ ಹಿನ್ನಲೆ ಬಿಜೆಪಿಯಲ್ಲಿ ಅಸಮಧಾನ ಮುಂದುವರೆದಿದೆ. ಕಾಂಗ್ರೆಸ್ ಅಭ್ಯರ್ಥಿ ಬಳಿಕ ಬಿಜೆಪಿ ಅಭ್ಯರ್ಥಿಗೆ ರಾಚೂರಿನಲ್ಲಿ ಗೋ ಬ್ಯಾಕ್ ಬಿಸಿ ಮುಟ್ಟಿದ್ದು, ಘೋಷಣೆಯಾದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ವಿರುದ್ದ ಬಿಜೆಪಿ ಕಾರ್ಯಕರ್ತರಿಂದಲೇ ಗೋ ಬ್ಯಾಕ್ ಅಮರೇಶ್ವರ್ ನಾಯಕ್ ಘೋಷಣೆ ಕೂಗಲಾಗಿದೆ. ಕಾರ್ಯಕರ್ತರ (No contact with worker’s) ಜೊತೆ ಸಂಪರ್ಕದಲ್ಲಿಲ್ಲದ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ ಅಂತ ಆಕ್ರೋಶ ಹೊರಹಾಕಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬುಗಿಲೆದ್ದ ಅಸಮಾಧಾನದ ಹೊಗೆ.
ಬಿ ವಿ ನಾಯಕ್ ಗೆ ಟಿಕೆಟ್ ತಪ್ಪಿದ ಹಿನ್ನೆಲೆ ರಾಜ್ಯ ಬಿಜೆಪಿ ನಾಯಕರ ವಿರುದ್ದ (Opposed) ಅಸಮಧಾನ ಹೊರಬಿದ್ದಿದೆ. ಯಾವ ಆಧಾರದ ಮೇಲೆ ಟಿಕೆಟ್ ಘೋಷಣೆ ಮಾಡಲಾಗಿದೆ ಎಂದು ಪ್ರಶ್ನೆ. ಇದೇ ಹಿನ್ನಲೆ ಆಪ್ತರ ಸಭೆ ಕರೆದು ಮುಂದಿನ ನಿರ್ಧಾರ ತಿಳಿಸುವುದಾಗಿ ಹೇಳಿರುವ ಬಿ.ವಿ.ನಾಯಕ್ ಬೆಂಬಲಿಗ, ಬಿಜೆಪಿ ಮುಖಂಡರು ಮಾಧ್ಯಮ ಗೋಷ್ಟಿ ಕರೆದಿದ್ದಾರೆ.
[ays_poll id=3]