This is the title of the web page
This is the title of the web page
Crime NewsState News

ಗುದದ್ವಾರಕ್ಕೆ ಗಾಳಿ ತುಂಬಿದ ಸ್ನೇಹಿತರ ತಮಾಷೆಗೆ : ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು


K2kannadanews.in

Crime News : ಸ್ನೇಹಿತರಿಬ್ಬರ (Friends) ಹುಡುಗಾಟದಲ್ಲಿ ಘೋರ ಘಟನೆ ನಡೆದು ಓರ್ವ ಸಾವನ್ನಪ್ಪಿದ್ದು (One died), ಗುದದ್ವಾರಕ್ಕೆ ಗಾಳಿ (Air) ಹಿಡಿದ ಪರಿಣಾಮ, ಕರುಳು ಬ್ಲಾಸ್ಟ್ (intestine blast) ಆಗಿ ಓರ್ವ ಸ್ನೇಹಿತ ಮೃತಪಟ್ಟ ಘಟನೆ ಜರುಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Benglore) ಘಟನೆ ಜರುಗಿದೆ. ಯೋಗಿಶ್ (yogesh 28) ಮೃತ ಯುವಕನಾಗಿದ್ದಾನೆ. ಮಾ.25ರಂದು ಬೈಕ್ ಸರ್ವೀಸ್ (Serves) ಮಾಡಲು ಸಿಎನ್ ಎಸ್ ಬೈಕ್ (Bike) ಸರ್ವೀಸ್ ಸೆಂಟರ್ ಗೆ ಮುರಳಿ (Muruli) ಎಂಬಾತ ಹೋಗಿದ್ದ, ಇದೇ ವೇಳೆ ಅದೇ ಸೆಂಟರ್‌ ಗೆ ಯೋಗಿಶ್ ಕೂಡ ಬಂದಿದ್ದ. ಇಬ್ಬರೂ ಈ ವೇಳೆ ಏರ್ ಪ್ಲೇಜರ್ (Air plazer) ಪೈಪ್ ನಿಂದ ಆಟ ಆಡಲು ಮುಂದಾಗಿದ್ದರು. ಮೊದಲಿಗೆ ಯೋಗಿಶ್ ನ ಮುಖ (Face) ಹಾಗೂ ಹೊಟ್ಟೆಗೆ (Stamc) ಮುರಳಿ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಯೋಗಿಶ್ ಗುದದ್ವಾರಕ್ಕೆ ಮುರಳಿ ಗಾಳಿ ಬಿಟ್ಟಿದ್ದೇ ಎಡವಟ್ಟಿಗೆ ಕಾರಣವಾಯ್ತು.

ಯೋಗಿಶ್ ಗುದದ್ವಾರಕ್ಕೆ ಗಾಳಿ ಬಿಟ್ಟ ಕಾರಣ ಹೊಟ್ಟೆ ಉತಾ ಬಂದು ಕರಳು ಬ್ಲಾಸ್ಟ್ ಆಗಿದೆ. ತಕ್ಷಣ ಯೋಗಿಶ್ ನನ್ನಿ ಸ್ನೇಹಿತ ಮುರಳಿ ಸ್ಥಳೀಯ ಆಸ್ಪತ್ರೆಗೆ (Hospital) ದಾಖಲಿಸಿದರಾದರು, ಚಿಕಿತ್ಸೆ ಫಲಕಾರಿಯಾಗದೇ ಯೋಗಿಶ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ (Sampige halli police station) ಪ್ರಕರಣ ದಾಖಲಾಗಿದ್ದು, ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡು ಸಂಪಿಗೇಹಳ್ಳಿ ಪೊಲೀಸರು ಸ್ನೇಹಿತ ಮುರಳಿಯನ್ನು ಬಂಧಿಸಿದ್ದಾರೆ.


[ays_poll id=3]