K2kannadanews.in
ನ್ಯೂಸ್ ಡೆಸ್ಕ್ : ಮದುವೆ ಮನೆಗಳಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳ ಆಗೋದು ಸಾಮಾನ್ಯ. ಕ್ಷುಲ್ಲಕ ಕಾರಣಕ್ಕೆ ಮದುವೆ (wedding rasgulla fighting) ಮಂಟಪದಲ್ಲಿಯೇ ಮದುವೆ ನಿಂತು ಹೋದ ಅನೇಕ ಪ್ರಕರಣಗಳು ನಮ್ಮ ಸುತ್ತಮುತ್ತ ನಡೆದಿವೆ. ಮದುವೆಯ ಮನೆಯ ಸಿಹಿ(sweet) ತಿಂಡಿಗಳಿಗೂ ಕಿರಿಕ್ ಗಳು ನಡೆದಿದೆ. ನಾವು ಈ ವಿಚಾರ ಮಾತನಾಡೋಕು ಕಾರಣ ಕೂಡ ಇದೆ.
ಉತ್ತರ ಪ್ರದೇಶದಲ್ಲಿ ಸೋಮವಾರ(Monday) ನಡೆದ ಮದುವೆ ಕಾರ್ಯಕ್ರಮದಲ್ಲಿ ರಸಗುಲ್ಲಾ ಕಡಿಮೆಯಾದ (Shortage of rasagullas ) ಕಾರಣ ಗಲಾಟೆ ನಡೆದಿದ್ದು ಈ ಗಲಾಟೆಯಲ್ಲಿ 6ಮಂದಿ ಗಾಯಗೊಂಡಿದ್ದಾರೆ(injured) ಎಂದು ವರದಿಯಾಗಿದೆ. ಊಟದ ಸಂದರ್ಭದಲ್ಲಿ ರಸಗುಲ್ಲಾ ಕಡಿಮೆಯಾಗಿರೋದು ಗಮನಕ್ಕೆ ಬಂದಿದೆ. ಇದೇ ವಿಚಾರವಾಗಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದವರ ನಡುವೆ ಗಲಾಟೆ ಏರ್ಪಟ್ಟಿದೆ ಎನ್ನಲಾಗಿದೆ.
ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ(hospital) ದಾಖಲು ಮಾಡಲಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು(doctor) ಮಾಹಿತಿ ನೀಡಿದ್ದಾರೆ.ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಶಂಸಾಬಾದ್ ಪೊಲೀಸರು ಮಾಹಿತಿ ನೀಡಿದ್ದಾರೆ.
[ays_poll id=3]