K2kannadanews.in
Suicide News : ಮಗನ (Son) ಸಾವಿನ ನೋವು (pain) ತಡೆಯಲಾಗದೆ 13 ದಿನಗಳ (Day 13) ಬಳಿಕ ತಂದೆಯೂ ನೇಣಿಗೆ ( Father suicide) ಶರಣಾಗಿರುವ ಮನಕಲಕುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ (Dakshina kannada) ಜಿಲ್ಲೆಯ ಬೆಳ್ತಂಗಡಿ (Belthangadi) ತಾಲೂಕಿನ ಉಜಿರೆಯ ಪೆರ್ಲದ ನಿವಾಸಿ ಯೋಗೀಶ್ ಪೂಜಾರಿ (41) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಯೋಗಿಶ್ ಪೂಜಾರಿ (yogesh pujari) ಮತ್ತು ರೇಷ್ಮಾ ದಂಪತಿಯ ಪುತ್ರ ಯಕ್ಷಿತ್ ಪೂಜಾರಿ (14) ಜನವರಿ 4ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಉಜಿರೆಯ ( Ujire) ಖಾಸಗಿ ಶಾಲೆಯಲ್ಲಿ 8ನೇ ತರಗತಿ(Standard) ಓದುತ್ತಿದ್ದ ಯಕ್ಷಿತ್ ಪೂಜಾರಿ ತನ್ನ 6 ವರ್ಷದ ತಮ್ಮನ ಜೊತೆ ಗಲಾಟೆ ಮಾಡಿಕೊಂಡ ವಿಚಾರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ.
ಮಗನ ಸಾವಿನ ಬಳಿಕ ಯೋಗೀಶ್ ಹಾಗೂ ರೇಷ್ಮಾ ದಂಪತಿ ಮಾನಸಿಕವಾಗಿ (mentally) ಕುಗ್ಗಿ ಹೋಗಿದ್ದರು. ಜನವರಿ 14ರಂದು ಯಕ್ಷಿತ್ ಪೂಜಾರಿಯ 11ನೇ ದಿನದ ಕಾರ್ಯ ನಡೆದಿತ್ತು. ಇದಾದ ಬಳಿಕ ಅತೀವವಾಗಿ ನೊಂದಿದ್ದ ತಂದೆ (Father) ಯೊಗೀಶ್ ಪೂಜಾರಿ ಇಂದು ಮಗ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿಯೇ ಸಾವಿಗೆ ಶರಣಾಗಿದ್ದಾರೆ. ಮಗನನ್ನು ಕಳೆದುಕೊಂಡ 13ನೇ ದಿನಕ್ಕೆ ತಂದೆಯೂ ಸಾವನ್ನಪ್ಪಿದ್ದು ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗ ಹಾಗೂ ತಂದೆಯ ಸಾವಿನ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (bekthangadi police station) ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
[ays_poll id=3]