K2kannadanews.in
Political News ರಾಯಚೂರು : ಮಾನ್ವಿ ಪಟ್ಟಣದಲ್ಲಿರುವ ಅಸಮಾಧಾನಿತ ಬಿಜೆಪಿ ಪಕ್ಷದ ಬಿ ವಿ ನಾಯಕ ನಿವಾಸದಲ್ಲಿ ಲೋಕಸಭಾ ಕ್ಷೇತ್ರದ ಪ್ರಭಾರಿ ಮತ್ತು ವಿಭಾಗಿಯ ಕಾರ್ಯದರ್ಶಿ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದಾರೆ.
ರಾಯಚೂರು ಲೋಕಸಭಾ ಚುನಾವಣೆ ಬಿ ವಿ ನಾಯಕ್ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ, ಬೆಂಬಲಿಗರಿಂದ ಅಸಮಾಧಾನ ಬುಗಿಲೆದ್ದು, ಕಾರ್ಯಕರ್ತರ ಸಭೆ ಮಾಡಿ, ಪ್ರತಿಭಟನೆ ಮಾಡಿ ಅಸಮಾಧಾನ ಹೊರಹಾಕಲಾಗಿತ್ತು. ಇದರ ಬೆನ್ನಲೆ ಬಿ ವಿ ನಾಯಕ್ ಅಸಮಾಧಾನ ನಿವಾರಣೆಗೆ ಮುಖಂಡರು ಆಗಮಿಸಿದ್ದಾರೆ. ಬಳ್ಳಾರಿ ವಿಭಾಗೀಯ ಕಾರ್ಯದರ್ಶಿ ಚಂದ್ರಶೇಖರದ ಅಲಿಗೇರಿ. ರಾಯಚೂರು ಲೋಕಸಭಾ ಕ್ಷೇತ್ರದ ಪ್ರಭಾರಿ ಕುಷ್ಟಗಿ ಶಾಸಕ ದೊಡ್ಡನಗೌಡ, ಮಾನ್ವಿ ಪಟ್ಟಣದಲ್ಲಿನ ಬಿ ವಿ ನಾಯಕ್ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ.
ಬಿ ವಿ ನಾಯಕ್ ಟಿಕೆಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ ಹಿನ್ನೆಲೆ ಮಾತುಕತೆ ನಡೆಸಿದ್ದಾರೆ. ಲೋಕಸಭಾ ಕ್ಷೇತ್ರದ ಪ್ರಭಾರಿಗಳು ಬಿ ವಿ ನಾಯಕ್ ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದು, ಪ್ರಸ್ತುತ ಇಲ್ಲಿನ ಪರಿಸ್ಥಿತಿಯನ್ನು ಮುಖಂಡರ ಗಮನಕ್ಕೆ ತರಲಾಗುವುದು ಎಂದು ಶಾಸಕ ದೊಡ್ಡನಗೌಡ ಅವರು ಹೇಳಿದರು.
[ays_poll id=3]