K2 ನ್ಯೂಸ್ ಡೆಸ್ಕ್ : ನರ್ಮದಾಪುರಂನಲ್ಲಿ ರಾಸಾಯನಿಕ ವಿಷಪೂರಿತ ನೀರು ಕುಡಿದು ಹಾವೊಂದು ಪ್ರಜ್ಞೆ ಕಳೆದುಕೊಂಡಿತ್ತು. ಈ ಹಾವಿನ ಸ್ಥಿತಿಯನ್ನು ನೋಡಿದ ಕಾನ್ಸ್ಟೇಬಲ್ ಅತುಲ್ ಶರ್ಮಾ ಅವರು ಕೂಡಲೇ ಕೈಯಲ್ಲಿ ಎತ್ತಿಕೊಂಡು ನೋಡಿದ್ದಾರೆ. ಹಾವು ಬದುಕೋ ಸಾಧ್ಯತೆಯನ್ನು ಗಮನಿಸಿದ ಕಾನ್ಸ್ಟೇಬಲ್, ಕೂಡಲೇ ಹಾವಿನ ಬಾಯಿಗೆ ಬಾಯಿ ಹಾಕಿ ಉಸಿರು ತುಂಬಿದ್ದಾರೆ.
ಅತುಲ್ ಶರ್ಮಾ ಅವರ ಪ್ರಯತ್ನಕ್ಕೆ ಕೆಲವೇ ಕ್ಷಣದಲ್ಲಿ ಯಶಸ್ಸು ಸಿಕ್ಕಿದೆ. ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಹಾವು ಉಸಿರಾಡಲು ಆರಂಭಿಸಿದೆ. ಸಾಯೋ ಸ್ಥಿತಿಯಲ್ಲಿದ್ದ ಹಾವು ಬಾಯಿ ತೆಗೆದಿದ್ದನ್ನು ನೋಡಿದ ಕಾನ್ಸ್ಟೇಬಲ್ ಸಂತಸ ವ್ಯಕ್ತಪಡಿಸಿದ್ದಾರೆ. ಹಾವಿಗೆ ಪುರ್ನಜನ್ಮ ನೀಡಿದ ಈ ಕಾನ್ಸ್ಟೇಬಲ್ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾನ್ಸ್ಟೇಬಲ್ ಹಾವಿಗೆ ಪುನರ್ಜನ್ಮ ನೀಡಿದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
[ays_poll id=3]