K2kannadanews.in
ರಾಯಚೂರು: ಚೀನಾದಲ್ಲಿ(China) ನ್ಯುಮೋನಿಯಾ(Pneumonia) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ(Caution) ವಹಿಸಲಾಗಿದೆ. ಇದರ ತಡೆಗೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಆಯಾ ಜಿಲ್ಲೆಗಳ ಆರೋಗ್ಯ ಇಲಾಖೆಗಳಿಗೆ(health deportment) ಆದೇಶಿಸಿದೆ. ರಾಯಚೂರು ಜಿಲ್ಲೆಯಲ್ಲಿ ಯಾವುದೇ ಪ್ರಕರಣ(case) ಪತ್ತೆಯಾಗಿಲ್ಲ. ಹೀಗಿದ್ದರೂ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಡಿಎಚ್ಒ(DHO) ಡಾ.ಸುರೇಂದ್ರಬಾಬು ತಿಳಿಸಿದರು.
ಮಳೆಗಾಲ(rainy) ಹಾಗೂ ಚಳಿಗಾಲದ(winter) ಪ್ರಾರಂಭದಲ್ಲಿ ಕೆಲ ದಿನಗಳಲ್ಲಿ ಮಕ್ಕಳು, ವೃದ್ಧರಲ್ಲಿ ನೆಗಡಿ, ಕೆಮ್ಮು ಸೀಜಿನಲ್ ಫ್ಲೂಲ್ ತರಹ ಕಾಣಿಸಿಕೊಳ್ಳುತ್ತಿದೆ. ಆದರೆ ಚೀನಾ ದೇಶದ ಮಕ್ಕಳಲ್ಲಿ ನೆಗಡಿ, ಕೆಮ್ಮು(Cold, cough) ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಲ್ಲಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದು ಪಾಲಿಸಲಾಗುತ್ತಿದೆ(guidelines) ಎಂದರು.
ಐಎಲ್ ಐ ಸ್ಯಾರಿ, ಸೀವಿಯರ್ ರೆಸ್ ಫೆಡರ್ ಕೇಸ್ಗಳ ಪತ್ತೆ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಎಲ್ಲ ಸಿಬ್ಬಂದಿ, ತಾಲೂಕು ಆಸ್ಪತ್ರೆ ವೈದ್ಯರುಗಳ(doctor) ಸಭೆ ನಡೆಸಲಾಗಿದೆ. ತಾಲೂಕು ಮಟ್ಟದ ವೈದ್ಯಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಒಂದು ವೇಳೆ ಪ್ರಕರಣಗಳು ಕಂಡುಬಂದಲ್ಲಿ ಅವರಿಗೆ ಚಿಕಿತ್ಸೆ(treatment) ನೀಡುವುದಕ್ಕೆ ಸೂಕ್ತವಾದ ಬೆಡ್ಗಳು(Bed), ವೆಂಟಿಲೇಟರ್(ventilator), ಅಗತ್ಯ ಔಷಧಿ, ಚಿಕಿತ್ಸೆಗೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಕೊಳ್ಳಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಸಭೆ ನಡೆಸಿದ್ದು, ಇಂಥ ಪ್ರಕರಣಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
[ays_poll id=3]