K2kannadanews.in
Accident News ರಾಯಚೂರು : ಬೈಕ್ ಮತ್ತು ಸಾರಿಗೆ ಬಸ್ ನಡುವೆ ಮುಖಾಮುಖಿ (Face to face) ಡಿಕ್ಕಿ ಸಂಭವಿಸಿ, ಸ್ಥಳದಲ್ಲಿ ಬೈಕಿನಲ್ಲಿದ್ದ (Bike) ಮೂವರು ಸವಾರರು ಮೃತಪಟ್ಟ ಘಟನೆ ಮಿಟ್ಟಿಮಲ್ಕಾಪುರ ಕ್ರಾಸ್ ಬಳಿ ನಡೆದಿದೆ.
ರಾಯಚೂರು (Raichur) ತಾಲೂಕಿನ ಮಿಟ್ಟಿಮಲ್ಕಾಪುರ ಕ್ರಾಸ್ ಬಳಿ ಬೀಕರ ಅಪಘಾತ (accident) ನಡೆದಿದ್ದು, ಬೈಕ್ ಮೇಲೆ ಹೋಗುತ್ತಿದ್ದ ಮೂವರು ಸವಾರರು ಸ್ಥಳದಲ್ಲಿ ಮೃತಪಟ್ಟಿದ್ದಾರೆ (On spot 3 death). ಮೃತರು ರಾಯಚೂರಿನ ಇಂದಿರಾನಗರ (Indira nagara) ನಿವಾಸಿಗಳಾದ ಪರಶುರಾಮ್ (30), ರಾಘವೇಂದ್ರ (35), ಗೋವಿಂದ (32), ಎಂದು ಗುರುತಿಸಲಾಗಿದೆ.
ಮಂತ್ರಾಲಯ (Manralaya) ರಾಯಚೂರು (Raichur) ಮಧ್ಯ ಓಡಾಡುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸಿಗೆ (government bus), ದ್ರಿಚಕ್ರ ವಾಹನ ಸವಾರರು ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಮುಂಭಾಗ ನಗ್ಗಿ ಹೋಗಿದ್ದು, ರಸ್ತೆಯಲ್ಲಿ ಮೂವರು ಬಿದ್ದಿದ್ದು ಭೀಕರ ಅಪಘಾತ ಜರುಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಯರಗೇರಾ ಪೊಲೀಸರು (Yaragera police) ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
[ays_poll id=3]