K2kannadanews.in
equipment seized ರಾಯಚೂರು : ರೈಲ್ವೇ (Railway) ಯೋಜನೆಗಾಗಿ ಭೂಮಿ (Land) ಪಡೆದು ಪರಿಹಾರ ನೀಡದ ಕಾರಣ ವಕೀಲರೊಂದಿಗೆ (layer) ಆಗಮಿಸಿ ದೂರುದಾರರು (Completer) ಸಹಾಯಕ ಆಯುಕ್ತರ ಕಚೇರಿ ಸಾಮಾಗ್ರಿ ಜಪ್ತಿ (Sized) ಮಾಡಿದ ಘಟನೆ ನಡೆದಿದೆ.
ರಾಯಚೂರು (Raichur) ನಗರದ ಸಹಾಯಕ ಆಯುಕ್ತರ (Assistant Commissioner) ಕಾರ್ಯಾಲಯದಲ್ಲಿ ಘಟನೆ ನಡೆದಿದ್ದು, ರೈಲ್ವೆ ಲೈನ್ ದ್ವಿಗುಣಕ್ಕೆ ರಾಯಚೂರಿನ ಜಮೀನು ಪಡೆದಿದ್ದ ಅಧಿಕಾರಿಗಳು (Officer). ಭೂಮಿಗೆ ಪರಿಹಾರ ಹಣ ಕೊಡದ ಹಿನ್ನೆಲೆ ಕಚೇರಿ ಸಾಮಗ್ರಿಗಳ ಜಪ್ತಿ ಮಾಡಲಾಗಿದೆ. ಸರ್ವೆ ನಂಬರ್ 183/1 ಜಮೀನು ಯಲ್ಲಮ್ಮ (Yallamma) ಎಂಬುವ ಮಹಿಳೆಯಿಂದ ಜಮೀನು ಪಡೆದ ಅಕ್ವಜೇಶನ್ ಅಧಿಕಾರಿಗಳು ಪರಿಹಾರ ಹಣ ಕೊಡುವಲ್ಲಿ ನಿರ್ಲಕ್ಷ್ಯ (Negligence) ವಹಿಸಿದ್ದರು. ನ್ಯಾಯಾಲಯದಲ್ಲಿ (court) ದೂರು ದಾಖಲಿಸಿ, ಪರಿಹಾರ ನೀಡುವಂತೆ ಆದೇಶ (Order) ನೀಡಿದ ನ್ಯಾಯಾಲಯ ಆದೇಶಕ್ಕೂ ಬೆಲೆ ಕೊಟ್ಟಿಲ್ಲ ಅಧಿಕಾರಿಗಳು ಎನ್ನಲಾಗುತ್ತಿದೆ.
2014ರಲ್ಲಿ ವಸೂಲಿಗಾಗಿ ನ್ಯಾಯಾಲಯದಲ್ಲಿ ಅರ್ಜಿ (application) ಸಲ್ಲಿಸಲಾಗಿತ್ತು. ಇದೇ ವಿಚಾರಕ್ಕೆ, 40 ಬಾರಿ ವಾರೆಂಟ್ (varient) ನೀಡಿದರು ಅದಕ್ಕೆ ಅಧಿಕಾರಿಗಳು ಸುಳ್ಳು (Fack information) ಮಾಹಿತಿ ನೀಡುತ್ತಿದ್ದರು. ಪರಿಹಾರ ಕೊಡುವಂತೆ ಆದೇಶ ಇದ್ದರೂ ಇದುವರೆಗೆ ಪರಿಹಾರ ಕೊಟ್ಟಿರಲಿಲ್ಲ. ಈ ಹಿನ್ನಲೆಯಲ್ಲಿ ಸಹಾಯಕ ಆಯುಕ್ತರ ಕಚೇರಿ ಸಾಮಗ್ರಿಗಳನ್ನ ಮಾರಾಟ ಮಾಡಲು ನ್ಯಾಯಾಲಯ ಆದೇಶ ನೀಡಿತ್ತು. ಆದೇಶದಂತೆ ಇಂದು ಸಹಾಯಕ ಆಯುಕ್ತರ ಕಚೇರಿಯಲ್ಲಿನ ಕಂಪ್ಯೂಟರ್ ಗಳು (Computer) ಸೇರಿದಂತೆ ವಿವಿಧ ಸಾಮಗ್ರಿಗಳನ್ನು (Materials) ಜಪ್ತಿ ಮಾಡಲಾಗಿದೆ ಎಂದು ಯಲ್ಲಮ್ಮ ಪರ ವಕೀಲ ಬಸವರಾಜ್ ಸಕ್ರಿ ಹಳಿದರು.
[ays_poll id=3]