K2kannadanews.in
Unknown Body found ಮಾನ್ವಿ : ನಿರ್ಜನ ಪ್ರದೇಶದಲ್ಲಿ ಅನಾಮಧೇಯ (Deserted area) ವ್ಯಕ್ತಿಯ ದೇಹ ಕೊಳೆತು, ಅಸ್ಥಿಪಂಜರವಾದ (skeleton)
ಸ್ಥಿತಿಯಲ್ಲಿ ದೊರೆತ ಘಟನೆ ಜರುಗಿದೆ.
ಹೌದು ರಾಯಚೂರು (Raichur) ಜಿಲ್ಲೆಯ ಮಾನ್ವಿ (manvi) ತಾಲ್ಲೂಕಿನ ನಕ್ಕುಂದಿ ಗ್ರಾಮದ, ಹೊರ ವಲಯದ ಮುಳ್ಳಿನ ಗಿಡಗಳ ಮಧ್ಯದ ನಿರ್ಜನ ಪ್ರದೇಶದಲ್ಲಿ ಅನಾಮಧೇಯ ಶವ ದೊರೆತಿದೆ. ಜಾಲಿ ಗಿಡದ ಮಧ್ಯದಲ್ಲಿ ದೊರೆತ ಶವ ಸಂಪೂರ್ಣ ಕೊಳೆತು (Rot) ಹೋಗಿದ್ದು, ಅಸ್ಥಿಪಂಜರ ಮಾತ್ರ ಉಳಿದುಕೊಂಡಿದೆ.
ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ 112 ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಮೃತ ದೇಹ ಬಿದ್ದಿರುವ ಸ್ಥಳ ನೋಡಿದರೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದ್ದು ಪೊಲೀಸ್ ತನಿಖೆಯಿಂದಲೇ ನಿಜ ಬಯಲಾಗಬೇಕಿದೆ. ಮಾನ್ವಿ ಪೊಲೀಸ್ ಠಾಣಾ (Manvi police) ವ್ಯಾಪ್ತಿಯಲ್ಲಿ ಘಟನೆ.
[ays_poll id=3]