This is the title of the web page
This is the title of the web page
Crime NewsState NewsVideo News

ಶಿಕ್ಷಕಿಯಿಂದ ಕಳ್ಳತನ ಆರೋಪ ಬಟ್ಟೆಬಿಚ್ಚಿಸಿ ಪರಿಶೀಲನೆ : ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ..!


K2kannadanews.in

student commits suicide : ಶಿಕ್ಷಕಿಯರ (Teachers) ಅನುಮಾನಕ್ಕೆ ಓರ್ವ ವಿದ್ಯಾರ್ಥಿನಿ (Student) ಜೀವ ಕಳೆದುಕೊಂಡ (Lost life) ಘಟನೆ ನಡೆದಿದೆ. ಹಣ ಕಳ್ಳತನವಾಗಿದೆ (Money thefr) ಅಂತ ಸಮವಸ್ತ್ರ ಬಿಚ್ಚಿಸಿ ವಿದ್ಯಾರ್ಥಿನಿ ಪರಿಶೀಲನೆ ನಡೆಸಿದ್ದು, ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ.

ಬಾಗಲಕೋಟೆ (Bagalkote) ಜಿಲ್ಲೆಯ ಕದಾಂಪುರ (Kundapur) ಗ್ರಾಮದಲ್ಲಿ ಘಟನೆ ನಡೆದಿದ್ದು. ಮೃತ ವಿದ್ಯಾರ್ಥಿನಿಯನ್ನು ದಿವ್ಯಾ ಬಾರಕೇರ(14) ಎಂದು ಗುರುತಿಸಲಾಗಿದೆ. ಶಿಕ್ಷಕಿಯೊಬ್ಬರ 2 ಸಾವಿರ (2 thousand) ಹಣ ಕಳೆದು (Lost) ಹೋಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಐವರು ವಿದ್ಯಾರ್ಥಿಗಳ‌ ( five) ಮೇಲೆ ಸಂಶಯ (Doubt) ಬಂದು ದೇವರ ಮೇಲೆ ಪ್ರಮಾಣ (Promise on god) ಮಾಡಿಸಿದ್ದರು. ನಂತರ ಕೊಠಡಿಯೊಂದರಲ್ಲಿ (School room) ಶಾಲಾ ಸಮವಸ್ತ್ರ ಸಹಿತ ಬಿಚ್ಚಿಸಿ ಚೆಕ್ ಮಾಡಿದ್ದರು. ಹೀಗಾಗಿ ಕಳ್ಳತನದ ಅನುಮಾನ ವ್ಯಕ್ತಪಡಿಸಿ ಅವಮಾನವಾದ (offended) ಹಿನ್ನೆಲೆಯಲ್ಲಿ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆದರೆ ಹಣ ಮಾರನೇ ದಿನ ಶಾಲೆಯ ಲ್ಯಾಬ್ (Money in lab) ನಲ್ಲಿತ್ತು ಎಂದು ತಿಳಿದು ಬಂದಿದೆ. ಸಂಶಯಕ್ಕೆ ಒಂದು ಜೀವ ಹೋಗಲು ಶಿಕ್ಷಕಿಯರು ಕಾರಣರಾಗಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿದ ಡಿಡಿಪಿಐ (DDPI) ಬಿಕೆ‌ ನಂದನೂರು ನನಗೆ ತಡವಾಗಿ ಮಾಹಿತಿ ಬಂದಿದೆ. ಶಿಕ್ಷಕಿಯರು ಈ ರೀತಿ ಅವಮಾನ ಮಾಡಿದ್ದೇ ಆದರೆ ಖಂಡಿತ ಸಹಿಸೋದಕ್ಕೆ ಸಾಧ್ಯವಿಲ್ಲ, ಪರಿಶೀಲನೆ ನಡೆಸಿ ಸೂಕ್ತ‌ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ (Rural police station) ಬಾಲಕಿ ಕುಟುಂಬಸ್ಥರಿಂದ ದೂರು (Case) ದಾಖಲು ಮಾಡಲಾಗಿದೆ.


[ays_poll id=3]