This is the title of the web page
This is the title of the web page
Politics News

ಏಮ್ಸ್ ರಾಯಚೂರಿಗೆ ನೀಡದಿದ್ದರೆ ಅಂಬೇಡ್ಕರ್ ವೃತ್ತದಲ್ಲಿ ಆತ್ಮಹತ್ಯೆ


ರಾಯಚೂರು : ಏಮ್ಸ್ ವಿಚಾರದಲ್ಲಿ ಕಲಬುರ್ಗಿ ಸಚಿವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಅವರು ರಾಯಚೂರು ಮತ್ತು ಕಲಬುರ್ಗಿ ಹೆಸರು ಹೇಳುವ ಮೂಲಕ, ಮತ್ತೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಂತಹ ಕೆಲಸ ಮಾಡಬೇಡಿ ಎಂದು ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡ ಪಾರಸಮಲ್ ಸುಖಾಣಿ ಸಚಿವ ಪ್ರಿಯಾಂಕಾ ಖರ್ಗೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಯಚೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಲಬುರ್ಗಿ ಸಚಿವರುಗಳಾದ ಡಾ.ಶರಣಪ್ರಕಾಶ್ ಪಾಟೀಲ್ ಈ ಹಿಂದೆ ಏಮ್ಸ್ ವಿಚಾರದಲ್ಲಿ ಕಲ್ಬುರ್ಗಿ ಹೆಸರು ಸೂಚಿಸಿದ್ದರು. ಇದೀಗ ಸಚಿವ ಪ್ರಿಯಾಂಕ ಖರ್ಗೆ ಅವರು ರಾಯಚೂರು ಮತ್ತು ಕಲಬುರ್ಗಿ ಹೆಸರು ಹೇಳುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಕೂಡ ಐ ಐ ಟಿ ವಿಚಾರದಲ್ಲಿ ಮೂರು ಹೆಸರು ಶಿಫಾರಸು ಮಾಡುವ ಮೂಲಕ ರಾಯಚೂರಿಗೆ ಕೈತಪ್ಪುವಂತೆ ಮಾಡಿದ್ದರು.

ಇಂತಹ ಗೊಂದಲದ ಹೇಳಿಕೆಗಳನ್ನು ನೀಡುವುದು ಬಿಟ್ಟು. ಮುಖ್ಯಮಂತ್ರಿಗಳು ಹೇಳಿರುವ ಹಾಗೆ ರಾಯಚೂರು ಜಿಲ್ಲೆಯ ಹೆಸರು ಮಾತ್ರ ಪ್ರಸ್ತಾಪಿಸಬೇಕು. ಇಂತಹ ಗೊಂದಲ ಸೃಷ್ಟಿಸುವ ಹೇಳಿಕೆ ಬಿಡಬೇಕು. ಒಂದು ವೇಳೆ ರಾಯಚೂರಿಗೆ ಏಮ್ಸ್ ನೀಡದಿದ್ದರೆ ಈ ಎಲ್ಲ ಹಿರಿಯ ಮುಖಂಡರುಗಳ ಸಮ್ಮುಖದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.


[ays_poll id=3]