ಸಿರವಾರ : ಆಕಸ್ಮಿಕ ಬೆಂಕಿ ಬಿದ್ದು ಗುಡಿಸಲು ಸಂಪೂರ್ಣ ಭಸ್ಮವಾದ ಘಟನೆ ಹರವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಕ್ಯಾಂಪಿನಲ್ಲಿ ಘಟನೆ ಸಂಭವಿಸಿದೆ.
ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಬಸವೇಶ್ವರ ಕ್ಯಾಂಪಿನಲ್ಲಿ ಘಟನೆ ನಡೆದಿದೆ. ರಂಗಪ್ಪ ನಾಯಕ ಎಂಬುವರ ಗುಡಿಸಲಿನಲ್ಲಿ ಬೆಳಗ್ಗೆ ದೇವರಿಗೆ ಹಚ್ಚಿಟ್ಟ ದೀಪದ ಕಿಡಿತಾಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಗುಡಿಸಿಲಿನಲ್ಲಿದ್ದ 1ಲಕ್ಷ ನಗದು ಸೇರಿ, 50 ಗ್ರಾಂ ಬಂಗಾರ, 30 ಗ್ರಾಂ ಬೆಳ್ಳಿ, ದವಸ ಧಾನ್ಯಗಳು, ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮನೆಯವರು ಹೊಲದ ಕೆಲಸಕ್ಕೆ ಹೋದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಮಾನ್ವಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಘಟನೆಗೆ ಸಂಬಂದಿಸಿದಂತೆ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
[ays_poll id=3]