K2 ನ್ಯೂಸ್ ಡೆಸ್ಕ್ : ವರುಣನ ಆರ್ಭಟಕ್ಕೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿಬಿದ್ದ ಘಟನೆ ಹಾಸನದ ಕೆ.ಆರ್ ಪುರಂ ಶಂಕರಮಠ ರಸ್ತೆಯಲ್ಲಿ ನಡೆದಿದೆ.
ರಾಜ್ಯಾದ್ಯಂತ ಇಂದು ವರುಣನ ಅಬ್ಬರ ಜೋರಾಗಿದೆ. ಕೆಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ಹಾಸನದಲ್ಲೂ ಗಾಳಿ ಗುಡುಗು ಸಹಿತ ಸುರಿದ ಮಳೆಗೆ ಬೃಹತ್ ಮರವೊಂದು ಚಲಿಸುತ್ತಿದ್ದ, ಇನ್ನೋವಾ ಕ್ರಿಸ್ಟಾ ಕಾರಿನ ಮೇಲೆ ಬಿದ್ದದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಜರುಗಿಲ್ಲ ಎಂದು ವರದಿಯಾಗಿದೆ.
[ays_poll id=3]