K2kannadanews.in
Attack ರಾಯಚೂರು : ಹತ್ತು ಜನ ಸೇರಿಕೊಂಡು ಓರ್ವ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೇ ಮಾಡಿದ ಪ್ರಕರಣ ಚಿಕ್ಕ ಬೇರಗಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಚಿಕ್ಕ ಬೇರಿಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಅಂಗಡಿಯಲ್ಲಿ ಕುಳಿತು ಮಾತನಾಡುವಾಗ ನಿಂಗಪ್ಪ ಎಂಬ ವ್ಯಕ್ತಿಗೆ ನೀನು ಕೆಳಜಾತಿಯವನು ನಮ್ಮ ಸರಿ ಸಮಾನವಾಗಿ ಕುಳಿತು ಮಾತನಾಡುತ್ತಿಯಾ ಎಂದು ನಿಂದನೆ ಮಾಡಿದ್ದರು ಎನ್ನಲಾಗಿದೆ. ಇದನ್ನು ಇಲ್ಲಿಗೆ ಬಿಡದೆ, ಇದೇ ವಿಚಾರವನ್ನು ಮುಂಡಿಟ್ಟುಕೊಂಡು ನಿಂಗಪ್ಪ ಹೊಲದಿಂದ ಮನೆಗೆ ಹೋಗುತ್ತಿದ್ದ ವೇಳೆ, 10 ಜನ ಗ್ರಾಮದ ಇನ್ನೊಂದು ಕೋಮಿನವರಿಂದ ಹಲ್ಲೆ ಮಾಡಲಾಗಿದೆ.
ಚಿಕ್ಕ ಬೇರಿಗಿ ಗ್ರಾಮದ ನಾಗಮ್ಮ ಹಾಗೂ ನಿಂಗಪ್ಪ ಅವರ ಮೇಲೇ ಮಾರಣಾಂತಿಕ ಹಲ್ಲೇ ಮಾಡಲಾಗಿದೆ. ನಿಂಗಪ್ಪ ಹೊಲದಿಂದ ಮನೆಗೆ ತೆರಳುತ್ತಿದ್ದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಂಬಕ್ಕೆ ಕಟ್ಟಿ ಹಾಕಿ ಕಲ್ಲು, ಕಟ್ಟಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ, ಅಲ್ಲದೇ ಜಗಳ ಬಿಡಿಸಲು ಬಂದ ಪತ್ನಿ ನಿಂಗಮ್ಮ ಅವರ ಸೀರೆ ಎಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಜೀವಬೆದರಿಕೆ ಹಾಕಿದ್ದರೆ ಎಂದು ತುರ್ವಿಹಾಳ ಪೋಲಿಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ನಮೋದಿಸಿದ್ದಾರೆ.
[ays_poll id=3]