This is the title of the web page
This is the title of the web page
Crime NewsState NewsVideo News

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ : 10ಲಕ್ಷ ಬೆಲೆಬಾಳುವ ಎತ್ತು ಸಜೀವ ದಹನ..!


K2kannadanews.in

ox burnt alive ರಾಯಚೂರು : ನಗರದ ಹೊವಲಯದ ಬೈಪಾಸ್ ರಸ್ತೆಯ ( bypass road) ಹರ್ಷಿತಾ ಗಾರ್ಡನ್ ನಲ್ಲಿ ಬೆಂಕಿ ಅವಘಡ (fire incident) ಸಂಭವಿಸಿದ್ದು, ಬೆಂಕಿಗೆ ದನದ ಕೊಟ್ಟಿಗೆಯಲ್ಲಿದ್ದ 10 ಲಕ್ಷ ಬೆಲೆಬಾಳುವ ಎತ್ತು (bull) ಸುಟ್ಟು ಕರಕಲಾಗಿದ‌ ಘಟನೆ ಜರುಗಿದೆ.

ರಾಯಚೂರು (Raichur) ನಗರದ ಹೊರವಲಯದಲ್ಲಿ ಇರುವ ಹರ್ಷಿತಾ ಗಾರ್ಡನ್‌ (Harshita garden) ಕಾಂಪೌಂಡ್ ಬಳಿ ಶಾರ್ಟ್ ಸರ್ಕ್ಯೂಟ್ (Short circuit)ನಿಂದ ಮೊದಲು ಬೆಂಕಿ (Fire) ಕಾಣಿಸಿಕೊಂಡಿದ್ದು, ತದ ನಂತರ ಇದ್ದಕ್ಕಿದ್ದ ಹಾಗೆ ಅಲ್ಲಿನ ಕಾರ್ಮಿಕರ ವಸತಿ ನಿಲಯ ಹಾಗೂ ಗೋದಾಮಿಗೂ (Godam) ಬೆಂಕಿ ಹಬ್ಬಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆ ಭಸ್ಮವಾಗಿದೆ. ಈ ಒಂದು ಬೆಂಕಿ ಅವಘಡದಲ್ಲಿ ಮನೆಯ(home) ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎರಡು ಎತ್ತುಗಳಲ್ಲಿ ಒಂದು ಎತ್ತು ಸಜೀವ ದಹನವಾಗಿದೆ. ಈ ಒಂದು ಎತ್ತು 10 ಲಕ್ಷ ಬೆಲೆ ಬಾಳುತ್ತಿತ್ತು, ಅಕ್ಕ ಪಕ್ಕದಲ್ಲಿ ನಡೆಯುವ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ (Coemption) ಪಾಲ್ಗೊಳಲು ಕರೆದೆಯಲಾಗುತ್ತಿತ್ತು.

ಸಿಲಿಂಡರ್ (Cylinder) ಸ್ಫೋಟಗೊಂಡ ಕಾರಣ ಒಂದು ಎತ್ತನ್ನು ರಕ್ಷಣೆ ಮಾಡಲು ಆಗಲಿಲ್ಲ ಎನ್ನುತ್ತಾರೆ ಸ್ಥಳೀಯರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರಾಯಚೂರು ವೆಸ್ಟ್ ಪೊಲೀಸ್ ಸ್ಟೇಷನ್ (West police station) ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


[ays_poll id=3]