K2kannadanews.in
Viral News : ಉತ್ತರ ಪ್ರದೇಶದ (UP) ಮುಖ್ಯಮಂತ್ರಿ (CM) ಯೋಗಿ ಆದಿತ್ಯನಾಥ್ (Yogi adithynath) ಅವರನ್ನು ಗೂಂಡಾ ಎಂದು ಸಾರ್ವಜನಿಕವಾಗಿ ಜರಿದ ವ್ಯಕ್ತಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ವಿಡಿಯೋ ವೈರಲ್ ಆದ ಬಳಿಕ ವ್ಯಕ್ತಿಯನ್ನು ಬಂಧಿಸಿ ಪೊಲೀಸರು ಥಳಿಸಿದ್ದಾರೆ.
ಆರೋಪಿಯನ್ನು (Accused) ಮೊಹಮ್ಮದ್ ವಾಸಿಂ ಎಂದು ಗುರುತಿಸಲಾಗಿದ್ದು ಈತ ಗಾಜಿಯಾಬಾದ್ನ (Gaziyabad) ಮಸ್ಸೂರಿ ನಿವಾಸಿ. ಸಾರ್ವಜನಿಕ ಸಂದರ್ಶನವೊಂದರಲ್ಲಿ (Public Interview) ಆತ ಯೋಗಿ ಆದಿತ್ಯನಾಥ್ ಒಬ್ಬ ಗೂಂಡಾ. ನನ್ನ ವಿರುದ್ಧ ಕೇಸ್ (Case) ದಾಖಲಿಸಿದರೂ ನನಗೆ ಭಯವಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತಿಹಾಸ ಮತ್ತು ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಪರಿಶೀಲಿಸಿ ಎಂದು ಸಂದರ್ಶಕರೊಂದಿಗೆ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಗೂಂಡಾಗಿರಿಯನ್ನು (in state roudisam) ಕೊನೆಗಾಣಿಸಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ವ್ಯಕ್ತಿ ಈ ರೀತಿ ಉತ್ತರಿಸಿದ್ದರು.
योगी खुद एक गुंडा है।
मुख्यमंत्री पर विवादित टिप्पणी करने वाले मोहम्मद वसीम को किया गिरफ्तार।
खातिरदारी का असर : मोहम्मद वसीम की चाल देखकर क्या नजर आ रहा है..?https://t.co/mD84ULPLYT https://t.co/mXl6genz6r pic.twitter.com/tXKhBx8kWy
— Shivam Dixit (@ShivamdixitInd) January 2, 2024
ಮುಸ್ಲಿಂ ವ್ಯಕ್ತಿಯ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral in social media) ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ (arrested). ಮತ್ತೊಂದು ವಿಡಿಯೋದಲ್ಲಿ ಬಂಧನವಾಗಿರುವ ವ್ಯಕ್ತಿಯನ್ನ ಪೊಲೀಸರು ಥಳಿಸಿದ್ದು ಆತ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದು ಅವನನ್ನು ಪೊಲೀಸರು ಕರೆದೊಯ್ಯುವ ವಿಡಿಯೋ ಕೂಡ ವೈರಲ್ ಆಗಿದೆ. ಆರೋಪಿಯು ಪೊಲೀಸರ ವಶದಲ್ಲಿದ್ದು, ಮುಂದಿನ ಕ್ರಮ ಜರುಗಿಸಲಾಗುತ್ತಿದೆ.
[ays_poll id=3]