ಲಿಂಗಸುಗೂರು : ನಾಡ ಕಚೇರಿಯ ಕೊಠಡಿಯೊಂದರ ಛತ್ತು ಏಕಾಏಕಿ ಕುಸಿದಿದ್ದು ಸಿಬ್ಬಂದಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ ಗುರುಗುಂಟಾ ಗ್ರಾಮದಲ್ಲಿ ನಡೆದಿದೆ.
ಗುರುಗುಂಟಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಹಳೆ ಕಟ್ಟಡ ವೊಂದರಲ್ಲಿ ನಾಡಕಚೇರಿ ಅನೇಕ ವರ್ಷಗಳಿಂದ ನಡೆಸಲಾಗುತ್ತಿತ್ತು. ಪ್ರತಿ ದಿನ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕಚೇರಿಯ ಛತ್ತು ಕುಸಿತ ಕಾಣಲಿದೆ ಎಂಬ ಸಣ್ಣ ಸುಳಿವೂ ಇರಲಿಲ್ಲ. ಮಧ್ಯಾಹ್ನ ಸಮಯದಲ್ಲಿ ಏಕಾಏಕಿ ಕುಸಿತವಾಗಿದೆ. ಅದೃಷ್ಟವಶಃ ಛತ್ತು ಬಿದ್ದ ಸ್ಥಳದ ಕೆಳಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಆ ಸಮಯಕ್ಕೆ ಎದ್ದು ಹೋಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಛತ್ತು ಕುಸಿತದಿಂದ ಸಿಬ್ಬಂದಿಗಳಿಗಾಗಲಿ, ಕೆಲಸ ಕಾರ್ಯಗಳಿಗಾಗಿ ಬಂದಂತ ಜನತೆಗಾಗಲಿ ಯಾವುದೇ ಅಪಾಯವಾಗಿಲ್ಲ. ಆದರೆ, ಕಚೇರಿಯ ಪೀಠೋಪಕರಣಗಳು ಧ್ವಂಸಗೊಂಡಿವೆ. ಕಂಪ್ಯೂಟರ್ ಸೇರಿದಂತೆ ಇತರೆ ದಾಖಲೆಗಳು ಹಾಳಾಗಿವೆ. ನಾಡ ಕಚೇರಿಯ ಹೊಸ ಕಟ್ಟಡ ಸಿದ್ಧವಾಗಿದ್ದು ಇನ್ನೂ ಉದ್ಘಾಟನೆಗೊಳ್ಳದಿದ್ದರಿಂದ ಹಳೆ ಕಟ್ಟಡದಲ್ಲಿ ನಡೆಯುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಶೀಘ್ರ ನಾಡ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕೆಂದು ಜನತೆ ಆಗ್ರಹಿಸಿದ್ದಾರೆ.
[ays_poll id=3]