LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

2 ಲಾರಿಗಳ ಮಧ್ಯ ಮುಖಾಮುಖಿ ಡಿಕ್ಕಿ : ಟ್ರಾಫಿಕ್ ಜಾಮ್ ಪ್ರಯಾಣಿಕರು ಸುಸ್ತು..

 

K2kannadanews.in

Crime News ಲಿಂಗಸೂಗೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಿಲೋಮೀಟರ್ ಕಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡಿದ ಪರಿಸ್ಥಿತಿ ಗೊಲಪಲ್ಲಿ ಗ್ರಾಮದ ಬಳಿ ನಡೆದಿದೆ.

https://youtube.com/shorts/A49Rlf-3xmI?si=4qqT_IbanI5_7czl

ಹೌದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗೋಲಪಲ್ಲಿ ಗ್ರಾಮದ ಬಳಿ ಈ ಒಂದು ಅಪಘಾತ ಜರುಗಿದೆ. ಜೇವರ್ಗಿ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150 ಎ ಕಿರಿದಾದ ರಸ್ತೆ ಇರುವುದರಿಂದ ಈ ಒಂದು ಸ್ಥಳದಲ್ಲಿ ಅಪಘಾತ ಜರುಗಿದೆ. ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ನಡು ರಸ್ತೆಯಲ್ಲಿ 2 ಲಾರಿ ನಿಂತಿದ್ದ ಕಾರಣ ಎರಡು ಬದಿಯ ವಾಹನಗಳು ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಘಟನೆಯಾಗುತ್ತಿದ್ದಂತೆ ಎರಡು ಬದಿಯಲ್ಲಿ ಸುಮಾರು 2 km ನಷ್ಟು ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಟ್ಟಿ ಪೊಲೀಸರು ಮಾಹಿತಿ ಪಡೆದು ಲಾರಿಗಳನ್ನು ತೆರವು ಮಾಡುವಲ್ಲಿ ಹರಸಾಹಸ ಪಡಬೇಕಾಯಿತು. ಘಟನೆಗೆ ಸಂಬಂಧಿಸಿದಂತೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

https://youtu.be/jaGbDNvPirw?si=PV9LXl4m_AB1losO
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾಲಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕ ಸ್ಥಳದಲ್ಲೇ ಸಾವು..ಕಪಗಲ್ ಗ್ರಾಮದಲ್ಲಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವು..ವಿಜಯಲಕ್ಷ್ಮಿ ಲಾಡ್ಜ್ ರೆಸ್ಟೊರೆಂಟ್ ಮತ್ತು ಬಾರ್, BPL ಕಾರ್ಡ ಹೋಲ್ಡರೇ ಇದರ ಮಾಲಿಕರು..ರಸ್ತೆ ತಡೆಗೆ ಬೇಲಿ ಹಾಕಿ ವಿದ್ಯಾರ್ಥಿಗಳಿಂದ ರಸ್ತೆ ತಡೆ..ಕಾಂಪೌಂಡ್ ಒಳಗೆ ಆಡುತ್ತಿದ್ದ ಬಾಲಕಿ ಮೇಲೆ  ಬೀದಿನಾಯಿ ದಾಳಿ..ಕುರ್ಡಿ ಗ್ರಾಮದಲ್ಲಿ ಭಾರಿ ಮಳೆಯಲ್ಲೂ ಎದೆಗುಂದದ ಮಹಿಳೆ..ಮಲಿಯಾಬಾದ್ ನಲ್ಲಿ 4 ವರ್ಷದ ಬಾಲಕನ ಮೇಲೆ ಬೀದಿನಾಯಿ ಬೀಕರ ದಾಳಿಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕೆ 45 ದಿನಗಳ ವಿಶೇಷ ಕೋರ್ಸ್ದನದ ಕೊಟ್ಟಿಗೆಯಲ್ಲಿ ಕ್ಷೀರಭಾಗ್ಯ ಹಾಲಿನ ಪುಡಿ ಪ್ರಕರಣಕ್ಕೆ ಟ್ವಿಸ್ಟ್..ರಾಯಚೂರು ತಹಶೀಲ್ದಾರರಿಗೆ 5 ಸಾವಿರ ದಂಡ ಮತ್ತು FIR ದಾಖಲಿಸಲು ಸೂಚನೆ..