LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೃಗಶಿರಾ ನಕ್ಷತ್ರದಂದು ರಾಯಚೂರಿನಲ್ಲಿ ಮೀನಿನ ಮದ್ದಿಗೆ ಮುಗಿಬಿದ್ದ ಜನ

ದಮ್ಮು, ಕೆಮ್ಮು, ಶೀತ, ಅಸ್ತಮಾ ಮುಂಜಾಗ್ರತಾ ಮದ್ದು..

ರಾಯಚೂರು: ಮುಂಗಾರು ಆರಂಭದ ಮೃಗಶಿರಾ ನಕ್ಷತ್ರದ ಅಂಗವಾಗಿ ರಾಯಚೂರಿನಲ್ಲಿ ಸಾಂಪ್ರದಾಯಿಕವಾಗಿ ನೀಡಲಾಗುವ ಮೀನಿನ ಮದ್ದು (ಫಿಷ್ ಥೆರಪಿ) ಪಡೆಯಲು ಸಾವಿರಾರು ಜನರು ಮುಗಿಬಿದ್ದರು. ನಗರದ ಜಲಗಾರ ತಿಕ್ಕಣ್ಣ ಕುಟುಂಬದವರು ಹಲವು ವರ್ಷಗಳಿಂದ ಈ ವಿಶೇಷ ಮದ್ದನ್ನು ವಿತರಿಸುತ್ತಿದ್ದು, ಈ ಬಾರಿ ಕೂಡ ಬೆಳಗಿನ ಜಾವದಿಂದಲೇ ಜನರು ಸರದಿ ಸಾಲಿನಲ್ಲಿ ನಿಂತು ಮದ್ದು ಪಡೆದರು.

ಬೆಳಿಗ್ಗೆ ಐದು ಗಂಟೆಯಿಂದಲೇ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಖಾಲಿ ಹೊಟ್ಟೆಯಲ್ಲಿ ಮದ್ದು ಸೇವಿಸಲು ಕಾದು ಕುಳಿತಿದ್ದರು. ಸುಮಾರು 2 ರಿಂದ 2.5 ಇಂಚು ಉದ್ದದ ಜೀವಂತ ಮುರ್ರೆಲ್ ಮೀನುಗಳ ಬಾಯಿಯಲ್ಲಿ ಆಯುರ್ವೇದ ಔಷಧಿಯ ಮಾತ್ರೆಯನ್ನು ಇಟ್ಟು, ಅದನ್ನು ನುಂಗಿಸುವ ಮೂಲಕ ಈ ಚಿಕಿತ್ಸೆ ನೀಡಲಾಗುತ್ತದೆ. ಸಣ್ಣ ಮೀನುಗಳನ್ನು ಜೀವಂತವಾಗಿ ನುಂಗಿಸುವ ಈ ವಿಧಾನವನ್ನು ಫಿಷ್ ಥೆರಪಿ ಎಂದು ಕರೆಯಲಾಗುತ್ತದೆ.

ದಮ್ಮು, ಕೆಮ್ಮು, ಶೀತ, ಅಸ್ತಮಾ ಸೇರಿದಂತೆ ಉಸಿರಾಟ ಸಂಬಂಧಿತ ಹಲವು ತೊಂದರೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಈ ಮದ್ದನ್ನು ಸೇವಿಸಲಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಬೇಸಿಗೆ ಮುಗಿದು ಮುಂಗಾರು ಆರಂಭವಾಗುವ ಸಂದರ್ಭದಲ್ಲಿ ವಾತಾವರಣದಲ್ಲಿ ಆಗುವ ಬದಲಾವಣೆಗಳಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೃಗಶಿರಾ ನಕ್ಷತ್ರದ ದಿನ ಈ ಮದ್ದನ್ನು ಪಡೆಯುವ ಸಂಪ್ರದಾಯ ಮುಂದುವರಿದಿದೆ.

ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಮೀನಿನ ಮದ್ದು ವಿತರಣಾ ಕೇಂದ್ರದ ಬಳಿ ದಿನವಿಡೀ ಜನಜಂಗುಳಿ ಕಂಡುಬಂದಿದ್ದು, ಮಹಿಳೆಯರು, ಪುರುಷರು ಹಾಗೂ ಮಕ್ಕಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮದ್ದು ಪಡೆದರು.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST