K2kannadanews.in
Guarantee 200 rupees ರಾಯಚೂರು : ಗ್ಯಾರಂಟಿ ಸಮಾವೇಶದಲ್ಲಿ ಸೇರಿದ ಗ್ರಾಮಾಂತರ (Rural) ಭಾಗದ ಫಲಾನುಭವಿಗಳಿಗೆ (Beneficiaries) 200 ರೂಪಾಯಿ ಕೊಡುವ ಭರವಸೆ ನೀಡಿ ಕರೆ ತಂದಿದ್ದಾರೆ ಎನ್ನಲಾಗುತ್ತಿದೆ.
ಹೌದು ರಾಯಚೂರು (Raichur) ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ (Stadium) ನಡೆದ ಕಾಂಗ್ರೆಸ್ (Congress) ಸಮಾವೇಶದಲ್ಲಿ ಇಂದು ಸಾಕಷ್ಟು ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಸೇರಿಸಲಾಗಿತ್ತು. ಉಪ ಮುಖ್ಯಮಂತ್ರಿ (DCM) ಡಿಕೆ ಶಿವಕುಮಾರ್ (D k shivakumar) ನೇತೃತ್ವದಲ್ಲಿ ನಡೆದ ಗ್ಯಾರಂಟಿ ಸಮಾವೇಶ. ಕಾರ್ಯಕ್ರಮಕ್ಕೆ ಜನರನ್ನ (People) ಕರೆತರಲು ಗ್ರಾಮ ಪಂಚಾಯತಿ ಸದಸ್ಯರಿಗೆ (GP members) ಜವಾಬ್ದಾರಿ ನೀಡಲಾಗಿತ್ತು. ಈ ವೇಳೆ ಸದಸ್ಯರು 200 ರೂಪಾಯಿ ಹಣ ಕೊಡುವುದಾಗಿ ಹೇಳಿ ಕರೆತಂದಿದ್ದರು ಎಂದು ಮಹಿಳೆಯರು ಮಾತನಾಡಿಕೊಳ್ಳುತ್ತಿದ್ದರು. ಕಾರ್ಯಕ್ರಮ ನಂತರ ಹಣ ನೀಡುತ್ತಾರೆ ಎಂದು ಕಾರ್ಯಕ್ರಮದ ಬಳಿಕ ಹಣಕ್ಕಾಗಿ ಪುಟ್ ಬಾತ್ ಮೇಲೆ ಕಾದು ಕುಳಿತಿದ್ದ ಮಹಿಳೆ ನರಸಮ್ಮ ಎಂಬ ಹೇಳಿದರು.
[ays_poll id=3]