K2kannadanews.in
Akshaya trutiya ರಾಯಚೂರು : ಅಕ್ಷಯ ತೃತೀಯ ಅಂಗವಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಚಂದನ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಯರ ಮೂಲ ಬೃಂದಾವನಕ್ಕೆ ಶ್ರೀಗಂಧ ಲೇಪನೆ ಮಾಡಿ ಪೂಜೆ ಸಲ್ಲಿಸಲಾಯಿತು.
ಹೌದು ಇಂದು ಅಕ್ಷಯ ತೃತೀಯ ಹಿನ್ನೆಲೆ ಪವಿತ್ರ ಶ್ರೀಗಂಧವನ್ನು ಗರ್ಭಗುಡಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಶ್ರೀ ರಾಯರ ಮೂಲ ಬೃಂದಾವನಕ್ಕೆ ಪುಣ್ಯ ಗಂಧಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗಂಧಕ್ಕೆ ಮಂಗಳಾರತಿ ನೆರವೇರಿಸಿದರು. ಮಠದ ಪೀಠಾಧಿಪತಿಗಳಾದ ಸುಭುದೇಂದ್ರ ತೀರ್ಥರು ಶ್ರೀಗಂಧವನ್ನು ರಾಯರ ಬೃಂದಾವನಕ್ಕೆ ಲೇಪನೆ ಮಾಡಿ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿಸಿದರು. ಅಲ್ಲದೇ ಕ್ಷೇತ್ರದ ಅಧಿದೇವತೆ ಮಂಚಾಲಮ್ಮ, ಪ್ರಾಣದೇವರು, ಶ್ರೀ ರುದ್ರ ದೇವರು ಮತ್ತು ಶ್ರೀ ಮಠದಲ್ಲಿನ ಸಂತರ ಇತರ ಪವಿತ್ರ ಬೃಂದಾವನಗಳಿಗೂ ಶ್ರೀಗಂಧ ಲೇಪನೆ ಮಾಡಿ ಅಕ್ಷಯ ತೃತೀಯ ಆಚರಿಸಲಾಯಿತು.
[ays_poll id=3]