K2kannadanews.in
Accused arrested ಲಿಂಗಸುಗೂರು : ಕಳೆದ ರಾತ್ರಿ ಮಹಿಳೆಯನ್ನು ಆಕೆಯ ಸೀರೆ ಸೆರಗಿನಿಂದ ಉಸಿರುಗಟ್ಟಿಸಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಎನ್.ಜಿ.ಓ ಬಡಾವಣೆ ಬಳಿಯ ಹಳ್ಳದ ಪಕ್ಕದ ಬೇಲಿಯಲ್ಲಿ ಕೊಲೆ ಮಾಡಲಾಗಿದೆ. 32 ವರ್ಷದ ವಿಜಯಲಕ್ಷ್ಮಿ ಕೊಲೆಯಾದ ಮಹಿಳೆ. ಎರಡು ವರ್ಷಗಳ ಹಿಂದೆ ಪತಿ ತೀರಿಕೊಂಡ ಹಿನ್ನೆಲೆ, ತವರು ಮನೆಯಲ್ಲಿದ್ದ ಮಹಿಳೆ, ಅದೇ ಗ್ರಾಮದ ದೇವರಾಜ ನಾಯಕ ಜತೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಈ ನಡುವೆ ದೇವರಾಜ ನಾಯಕನಿಂದಲೂ ವಿಜಯಲಕ್ಷ್ಮಿ ಅಂತರ ಕಾಯ್ದುಕೊಂಡಿದ್ದಳು. ನಿನ್ನೆ ರಾತ್ರಿಯೂ ಇವರ ಅಕ್ರಮ ಸಂಬಂಧ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
[ays_poll id=3]